ಆ್ಯಸಿಡ್ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಇಂದಿರಾಬಾಯಿ ಅವರನ್ನು ತಕ್ಷಣ ಹತ್ತಿರದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಕೊಡಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸೌಂದರ್ಯ ಕಾಲೇಜು ಬಳಿ ಇರುವ ಇಂದಿರಾಬಾಯಿ ಮನೆಯ ಸಮೀಪ ಕೃತ್ಯ
ನಡೆದಿದೆ. ಕೆಲಸಕ್ಕೆಂದು ಹೋಗುವಾಗ ಆರೋಪಿಗಳು ಮುಖ ಹಾಗೂ ಎದೆ ಭಾಗಕ್ಕೆ ಆ್ಯಸಿಡ್ ಎರಚಿದ್ದಾರೆ.