<p><strong>ದಾಬಸ್ ಪೇಟೆ:</strong> ಆದಿಚುಂಚನಗಿರಿಯ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಬುಧವಾರ ಶಿವಗಂಗೆ ಬೆಟ್ಟ ಏರಿದರು. ಬೆಟ್ಟದ ಮೇಲಿಂದ ಪ್ರಕೃತಿ ಸೌಂದರ್ಯವನ್ನು ಸವಿದು, ಬೆಟ್ಟದ ತುತ್ತ ತುದಿಯ ಮೇಲೆ ಭಕ್ತರೊಂದಿಗೆ ಭಜನೆ ಮಾಡಿದರು.</p>.<p>‘ಶ್ರೀ ಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರತಿಷ್ಠಾನ’ದ ವತಿಯಿಂದ ಬುಧವಾರ ದಿವ್ಯ ದರ್ಶನ ಯಾತ್ರೆ ಹಾಗೂ ಗಿರಿ ನಡಿಗೆ ಕಾರ್ಯಕ್ರಮವನ್ನು ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.</p>.<p>ಶಿವಗಂಗೆಯ ಹಿಪ್ಪೆವನದಿಂದ (ಪ್ರವಾಸಿ ಮಂದಿರದ ಪಕ್ಕ) ಬೆಳಗ್ಗೆ 7 ಗಂಟೆಗೆ ‘ಗಿರಿ ನಡಿಗೆ’ ಆರಂಭವಾಯಿತು. ಬೆಟ್ಟದ ಹೆಬ್ಬಾಗಿಲಿನಿಂದ, ಸುಮಾರು 4 ಸಾವಿರ ಅಡಿಗಳ ಎತ್ತರದ ಬೆಟ್ಟದ ತುತ್ತತುದಿಯವರೆಗೆ ಸ್ವಾಮೀಜಿ ಜೊತೆ ಹಲವಾರು ಮಠಾಧೀಶರು, ಬಿಜೆಎಸ್ ಸಮೂಹ ಶಿಕ್ಷಣ ಸಂಸ್ಥೆಯ 1,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ನೆಲಮಂಗಲ ತಾಲೂಕಿನ ಸಮುದಾಯದ ಮುಖಂಡರು, ಭಕ್ತರು ಪಾಲುದಾರರಾದರು.</p>.<p>ಬೆಟ್ಟದ ತುದಿಯ ತೀರ್ಥ ಕಂಬದ ಬಳಿ ಭಜನೆ ನಡೆಸಿದರು. ಸ್ವಾಮೀಜಿ ಹಾರ್ಮೋನಿಯಂ ನುಡಿಸಿದರು. ಭಕ್ತಿ ಗೀತೆಗಳನ್ನು ಹಾಡಿದರು.</p>.<p>ಒಳಕಲ್ಲು ತೀರ್ಥ, ನಾಟ್ಯರಾಣಿ ಶಾಂತಲಾ ಐಕ್ಯವಾದ ಸ್ಥಳ, ಶ್ರೀ ಹೊನ್ನಾದೇವಿ ಸಮೇತ ಗಂಗಾಧರೇಶ್ವರ ಸ್ವಾಮಿ ದೇವಾಲಯ, ನಾಡಪ್ರಭು ಕೆಂಪೇಗೌಡರ ಪುತ್ಥಳಿ, ಹಜಾರ ಇನ್ನಿತರ ಸ್ಥಳಗಳನ್ನು ವೀಕ್ಷಿಸಿದರು.</p>.<p>‘ಭಕ್ತರ ಜೊತೆ ಆಧ್ಯಾತ್ಮಿಕ ಪಾದಯಾತ್ರೆ ಮಾಡಬೇಕೆಂಬ ಬಯಕೆಯಿತ್ತು. ಅದು ಇಂದು ಈಡೇರಿದೆ. ಶಿವಗಂಗೆಯಲ್ಲಿ ಶಾಖಾ ಮಠ ಆರಂಭಿಸಬೇಕು ಎನ್ನುವುದು ಬಹುದಿನಗಳ ಬಯಕೆ ಆಗಿದೆ’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.</p>.<p>ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ರಮಣಾನಂದ ಸ್ವಾಮೀಜಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಬಸ್ ಪೇಟೆ:</strong> ಆದಿಚುಂಚನಗಿರಿಯ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಬುಧವಾರ ಶಿವಗಂಗೆ ಬೆಟ್ಟ ಏರಿದರು. ಬೆಟ್ಟದ ಮೇಲಿಂದ ಪ್ರಕೃತಿ ಸೌಂದರ್ಯವನ್ನು ಸವಿದು, ಬೆಟ್ಟದ ತುತ್ತ ತುದಿಯ ಮೇಲೆ ಭಕ್ತರೊಂದಿಗೆ ಭಜನೆ ಮಾಡಿದರು.</p>.<p>‘ಶ್ರೀ ಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರತಿಷ್ಠಾನ’ದ ವತಿಯಿಂದ ಬುಧವಾರ ದಿವ್ಯ ದರ್ಶನ ಯಾತ್ರೆ ಹಾಗೂ ಗಿರಿ ನಡಿಗೆ ಕಾರ್ಯಕ್ರಮವನ್ನು ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.</p>.<p>ಶಿವಗಂಗೆಯ ಹಿಪ್ಪೆವನದಿಂದ (ಪ್ರವಾಸಿ ಮಂದಿರದ ಪಕ್ಕ) ಬೆಳಗ್ಗೆ 7 ಗಂಟೆಗೆ ‘ಗಿರಿ ನಡಿಗೆ’ ಆರಂಭವಾಯಿತು. ಬೆಟ್ಟದ ಹೆಬ್ಬಾಗಿಲಿನಿಂದ, ಸುಮಾರು 4 ಸಾವಿರ ಅಡಿಗಳ ಎತ್ತರದ ಬೆಟ್ಟದ ತುತ್ತತುದಿಯವರೆಗೆ ಸ್ವಾಮೀಜಿ ಜೊತೆ ಹಲವಾರು ಮಠಾಧೀಶರು, ಬಿಜೆಎಸ್ ಸಮೂಹ ಶಿಕ್ಷಣ ಸಂಸ್ಥೆಯ 1,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ನೆಲಮಂಗಲ ತಾಲೂಕಿನ ಸಮುದಾಯದ ಮುಖಂಡರು, ಭಕ್ತರು ಪಾಲುದಾರರಾದರು.</p>.<p>ಬೆಟ್ಟದ ತುದಿಯ ತೀರ್ಥ ಕಂಬದ ಬಳಿ ಭಜನೆ ನಡೆಸಿದರು. ಸ್ವಾಮೀಜಿ ಹಾರ್ಮೋನಿಯಂ ನುಡಿಸಿದರು. ಭಕ್ತಿ ಗೀತೆಗಳನ್ನು ಹಾಡಿದರು.</p>.<p>ಒಳಕಲ್ಲು ತೀರ್ಥ, ನಾಟ್ಯರಾಣಿ ಶಾಂತಲಾ ಐಕ್ಯವಾದ ಸ್ಥಳ, ಶ್ರೀ ಹೊನ್ನಾದೇವಿ ಸಮೇತ ಗಂಗಾಧರೇಶ್ವರ ಸ್ವಾಮಿ ದೇವಾಲಯ, ನಾಡಪ್ರಭು ಕೆಂಪೇಗೌಡರ ಪುತ್ಥಳಿ, ಹಜಾರ ಇನ್ನಿತರ ಸ್ಥಳಗಳನ್ನು ವೀಕ್ಷಿಸಿದರು.</p>.<p>‘ಭಕ್ತರ ಜೊತೆ ಆಧ್ಯಾತ್ಮಿಕ ಪಾದಯಾತ್ರೆ ಮಾಡಬೇಕೆಂಬ ಬಯಕೆಯಿತ್ತು. ಅದು ಇಂದು ಈಡೇರಿದೆ. ಶಿವಗಂಗೆಯಲ್ಲಿ ಶಾಖಾ ಮಠ ಆರಂಭಿಸಬೇಕು ಎನ್ನುವುದು ಬಹುದಿನಗಳ ಬಯಕೆ ಆಗಿದೆ’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.</p>.<p>ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ರಮಣಾನಂದ ಸ್ವಾಮೀಜಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>