2007ರಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರವು ಆಗರ, ಹೆಬ್ಬಾಳ, ವೆಂಗಯ್ಯನಕೆರೆ ಮತ್ತು ನಾಗವಾರ ಕೆರೆಗಳನ್ನು ನಿರ್ವಹಣೆಗಾಗಿ ಖಾಸಗಿಯವರಿಗೆ ವಹಿಸಿತ್ತು. 15 ವರ್ಷಗಳ ಅವಧಿಗೆ ಅವರಿಗೆ ಗುತ್ತಿಗೆ ವಹಿಸಲಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಕೆರೆ ಹೋರಾಟಗಾರರು ಮತ್ತು ಎಚ್ಎಸ್ಆರ್ ವಾರ್ಡ್ನ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು.