ಫಣೀಂದ್ರ ಅವರಿಗೆ ನವದೆಹಲಿಯ ‘ಏಮ್ಸ್’ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುವ ಬಯಕೆ ಇತ್ತು. ಇದೀಗ ಅವರು ಗಳಿಸಿದ ರ್ಯಾಂಕ್ಗೆ ಅಲ್ಲಿ ಸೀಟು ಸಿಗುವ ಸಾಧ್ಯತೆ ಕಡಿಮೆ ಇದ್ದು, ಜೋಧಪುರ ಅಥವಾ ಭುವನೇಶ್ವರದಲ್ಲಿ ಸೀಟು ಸಿಗುವುದು ನಿಶ್ಚಿತ. ‘ನನಗೆ ಸರ್ಜನ್ ಆಗುವ ಗುರಿ ಇದೆ’ ಎಂದು ಅವರು ಹೇಳಿದರು.
ಪ್ರಜ್ಞಾ ಮಿತ್ರಾ ಅವರಿಗೆ ಹೃದ್ರೋಗ ಸರ್ಜನ್ ಆಗುವ ಬಯಕೆ ಇದೆ. ‘2014ರಲ್ಲಿ ನನ್ನ ತಂದೆ ಹೃದಯಾಘಾತಕ್ಕೆ ಮತ್ತು ಮಿದುಳಿನ ಪಾರ್ಶವಾಯುವಿಗೆ ತುತ್ತಾದರು. ಹೀಗಾಗಿ ವೈದ್ಯಕೀಯ ಕ್ಷೇತ್ರಕ್ಕೇ ಹೋಗುವ ಸಂಕಲ್ಪವನ್ನು ಅಂದು ಮಾಡಿದ್ದೆ’ ಎಂದು ಅವರು ಹೇಳಿದರು.
ನೀಟ್ನಲ್ಲಿ 208ನೇ ರ್ಯಾಂಕ್ ಗಳಿಸಿದ್ದಸಾಯಿ ರಾಂ ‘ಏಮ್ಸ್’ನಲ್ಲಿ 67ನೇ ರ್ಯಾಂಕ್ ಗಳಿಸಿದ್ದಾರೆ. ‘ನನಗೆ ಜಿಪ್ಮೆರ್ ಪ್ರವೇಶ ಪರೀಕ್ಷೆಯಲ್ಲಿ 37ನೇ ರ್ಯಾಂಕ್ ಬಂದಿದೆ. ಹೀಗಾಗಿ ಅಲ್ಲೇ ವೈದ್ಯಕೀಯ ವ್ಯಾಸಂಗ ಮುಂದುವರಿಸುವೆ’ ಎಂದು ಅವರು ಹೇಳಿದರು.