‘ಮೈಸೂರು ಪಾಕ್ ಮಾರಾಟಕ್ಕಾಗಿ ಫೇಸ್ಬುಕ್ನಲ್ಲಿ ಜಾಹೀರಾತು ನೀಡ ಲಾಗಿತ್ತು. ಸೈನಿಕನೆಂದು ಹೇಳಿಕೊಂಡು ಸಂದೇಶ ಕಳುಹಿಸಿದ್ದ ರಂಜಿತ್ ಸಿಂಗ್ ಎಂಬಾತ 30 ಕೆ.ಜಿ ಮೈಸೂರು ಪಾಕ್ ಬೇಕೆಂದು ತಿಳಿಸಿದ್ದ. ಜ. 15ರಂದು ವಿಮಾನ ನಿಲ್ದಾಣದಲ್ಲಿ ಡೆಲಿವರಿ ನೀಡುವಂತೆ ಕೋರಿದ್ದ. ವಿಳಾಸ ಸಹ ಕಳುಹಿಸಿದ್ದ. ಕರೆ ಮಾಡಿಯೂ ಮಾತನಾಡಿದ್ದ.’ ‘ಮುಂಗಡವಾಗಿ ಹಣ ನೀಡು ವುದಾಗಿ ಹೇಳಿದ್ದ ರಂಜಿತ್, ಕ್ಯೂಆರ್ ಕೋಡ್ ಕಳುಹಿಸಿ ಸ್ಕ್ಯಾನ್ ಮಾಡುವಂತೆ ತಿಳಿಸಿದ್ದ. ಈತನ ನಡೆಯಿಂದ ಅನುಮಾನಗೊಂಡು ಸ್ಕ್ಯಾನ್ ಮಾಡಲಿಲ್ಲ. ₹ 1 ರೂಪಾಯಿ ಕಳುಹಿ ಸುವಂತೆ ಆತನಿಗೆ ಹೇಳಲಾಗಿತ್ತು. ಅಷ್ಟಕ್ಕೆ ಆತ, ಕರೆ ಕಡಿತಗೊಳಿಸಿದ’ ಎಂದು ಪ್ರಸಾದ್ ಬರೆದುಕೊಂಡಿದ್ದಾರೆ.