<p><strong>ಬೆಂಗಳೂರು</strong>: ‘ಕೋಟ್ಯಂತರ ಕನ್ನಡಿಗರ ಜನಮಾನಸದಲ್ಲಿ ಉಳಿದಿರುವ ‘ಅಪ್ಪು’ ಎಂದೂ ಬಾಡದ ಬೆಟ್ಟದ ಹೂವು’ ಎಂದು ನಟ ಶ್ರೀನಾಥ್ ಹೇಳಿದರು.</p>.<p>ನಗರದಲ್ಲಿ ಸನಾತನಿ ಸಾಹಿತ್ಯ ವೇದಿಕೆ ಮತ್ತು ಶ್ರೀಕೃಷ್ಣ ಕಲಾಸಂಗಮದ ಸಹಯೋಗದಲ್ಲಿ ಆಯೋಜಿಸಿದ್ದ ಲೇಖಕ ವೈ.ಬಿ.ಎಚ್. ಜಯದೇವ್ ಅವರು ನಟ ಪುನಿತ್ ರಾಜ್ಕುಮಾರ್ ಕುರಿತು ಬರೆದ ‘ಅಪ್ಪು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಕನ್ನಡ ಚಿತ್ರರಂಗಕ್ಕೆ ಹೊಸ ಕ್ರಿಯಾಶೀಲತೆ ತಂದು ಕೊಟ್ಟ ಅಪ್ಪು, ತನ್ನ ಅಪ್ರತಿಮ ಸಮಾಜಸೇವೆಯ ಮೂಲಕ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿ ಬೆಳೆದು ನಿಜವಾಗಿ ದೇವತಾ ಮನುಷ್ಯನೇ ಆದರು’ ಎಂದರು.</p>.<p>ಕೃತಿ ಲೇಖಕ ಜಯದೇವ್ ಮಾತನಾಡಿ, ‘ನಗುಮೊಗದ ಮೂಲಕ ಕನ್ನಡಿಗರ ಮನಗೆದ್ದ ಅಪ್ಪು ತಮ್ಮ ಪ್ರಾಂಜಲ ಸಮಾಜಸೇವೆಯ ಮೂಲಕ ಕನ್ನಡಿಗರ ಮನದಲ್ಲಿ ವಿರಾಜಮಾನರಾಗಿದ್ದಾರೆ. ಆನೆಯನ್ನು ಕನ್ನಡಿಯಲ್ಲಿ ತೋರಿಸುವಂತೆ, ಹಿಮಾಲಯ ಸದೃಶ ವ್ಯಕ್ತಿತ್ವದ ಅಪ್ಪು ಅವರನ್ನು ಈ ಪುಟ್ಟ ಕೃತಿಯ ಮೂಲಕ ಪರಿಚಯಸುವ ಪ್ರಯತ್ನ ಮಾಡಿದ್ದೇನೆ’ ಎಂದರು.</p>.<p>ಕಾದಂಬರಿಕಾರ್ತಿ ಮಮತಾ ವಾರನಹಳ್ಳಿ ಮಾತನಾಡಿ, ‘ನಮ್ಮ ವೇದಿಕೆಗಳ ಮೂಲಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ವಿನೂತನವಾಗಿ ಆಯೋಜಿಸುವ ಆಲೋಚನೆಯ ಜೊತೆಗೆ ‘ಅಪ್ಪು’ ಪುಸ್ತಕ ಬಿಡುಗಡೆಗೊಳಿಸಿದ ಕೃತಾರ್ಥತೆ ನಮ್ಮದು’ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ನಟಿ ಶೈಲಶ್ರೀ ಸುದರ್ಶನ್, ಹಾಸ್ಯ ಕಲಾವಿದ ಬೆಂಗಳೂರು ನಾಗೇಶ್, ಎಸ್.ಕೆ.ಅನಂತ್, ಸಂಗೀತ ನಿರ್ದೇಶಕ ವೆಂಕಟರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಷಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಕೋಟ್ಯಂತರ ಕನ್ನಡಿಗರ ಜನಮಾನಸದಲ್ಲಿ ಉಳಿದಿರುವ ‘ಅಪ್ಪು’ ಎಂದೂ ಬಾಡದ ಬೆಟ್ಟದ ಹೂವು’ ಎಂದು ನಟ ಶ್ರೀನಾಥ್ ಹೇಳಿದರು.</p>.<p>ನಗರದಲ್ಲಿ ಸನಾತನಿ ಸಾಹಿತ್ಯ ವೇದಿಕೆ ಮತ್ತು ಶ್ರೀಕೃಷ್ಣ ಕಲಾಸಂಗಮದ ಸಹಯೋಗದಲ್ಲಿ ಆಯೋಜಿಸಿದ್ದ ಲೇಖಕ ವೈ.ಬಿ.ಎಚ್. ಜಯದೇವ್ ಅವರು ನಟ ಪುನಿತ್ ರಾಜ್ಕುಮಾರ್ ಕುರಿತು ಬರೆದ ‘ಅಪ್ಪು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಕನ್ನಡ ಚಿತ್ರರಂಗಕ್ಕೆ ಹೊಸ ಕ್ರಿಯಾಶೀಲತೆ ತಂದು ಕೊಟ್ಟ ಅಪ್ಪು, ತನ್ನ ಅಪ್ರತಿಮ ಸಮಾಜಸೇವೆಯ ಮೂಲಕ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿ ಬೆಳೆದು ನಿಜವಾಗಿ ದೇವತಾ ಮನುಷ್ಯನೇ ಆದರು’ ಎಂದರು.</p>.<p>ಕೃತಿ ಲೇಖಕ ಜಯದೇವ್ ಮಾತನಾಡಿ, ‘ನಗುಮೊಗದ ಮೂಲಕ ಕನ್ನಡಿಗರ ಮನಗೆದ್ದ ಅಪ್ಪು ತಮ್ಮ ಪ್ರಾಂಜಲ ಸಮಾಜಸೇವೆಯ ಮೂಲಕ ಕನ್ನಡಿಗರ ಮನದಲ್ಲಿ ವಿರಾಜಮಾನರಾಗಿದ್ದಾರೆ. ಆನೆಯನ್ನು ಕನ್ನಡಿಯಲ್ಲಿ ತೋರಿಸುವಂತೆ, ಹಿಮಾಲಯ ಸದೃಶ ವ್ಯಕ್ತಿತ್ವದ ಅಪ್ಪು ಅವರನ್ನು ಈ ಪುಟ್ಟ ಕೃತಿಯ ಮೂಲಕ ಪರಿಚಯಸುವ ಪ್ರಯತ್ನ ಮಾಡಿದ್ದೇನೆ’ ಎಂದರು.</p>.<p>ಕಾದಂಬರಿಕಾರ್ತಿ ಮಮತಾ ವಾರನಹಳ್ಳಿ ಮಾತನಾಡಿ, ‘ನಮ್ಮ ವೇದಿಕೆಗಳ ಮೂಲಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ವಿನೂತನವಾಗಿ ಆಯೋಜಿಸುವ ಆಲೋಚನೆಯ ಜೊತೆಗೆ ‘ಅಪ್ಪು’ ಪುಸ್ತಕ ಬಿಡುಗಡೆಗೊಳಿಸಿದ ಕೃತಾರ್ಥತೆ ನಮ್ಮದು’ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ನಟಿ ಶೈಲಶ್ರೀ ಸುದರ್ಶನ್, ಹಾಸ್ಯ ಕಲಾವಿದ ಬೆಂಗಳೂರು ನಾಗೇಶ್, ಎಸ್.ಕೆ.ಅನಂತ್, ಸಂಗೀತ ನಿರ್ದೇಶಕ ವೆಂಕಟರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಷಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>