ಬೆಂಗಳೂರು: ನಗರದಲ್ಲಿ ನ.19 ಹಾಗೂ 20ರಂದು ಸೂರ್ಯದೇವರ ಆರಾಧನೆ (ಛತ್ ಪೂಜೆ) ನಡೆಯಲಿದ್ದು, ಬಿಬಿಎಂಪಿ ಹಲಸೂರು ಕೆರೆಯಲ್ಲಿ ಪೂಜೆಗೆ ವ್ಯವಸ್ಥೆ ಕಲ್ಪಿಸಿದೆ.
ಕೆರೆಯ ಉತ್ತರ ದಿಕ್ಕಿನ ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯ ಮುಖ್ಯದ್ವಾರದ ಮೂಲಕವೇ ಬಂದು ಹಲಸೂರು ಕೆರೆಯ ಕಲ್ಯಾಣಿಯಲ್ಲಿ (ಗಣಪತಿ ವಿಸರ್ಜನೆ ಕಲ್ಯಾಣಿ) ಮಾತ್ರವೇ ಪೂಜೆ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪ್ಲಾಸ್ಟಿಕ್ ಪೇಪರ್ ಮುಂತಾದ ವಿಷಯುಕ್ತ ವಸ್ತುಗಳನ್ನು ಕೆರೆಯ ಅಂಗಳಕ್ಕೆ ತರಬಾರದೆಂದು ಸೂಚಿಸಲಾಗಿದೆ. ಹಲಸೂರು ಕೆರೆಯ ಬೇರೆ ದಿಕ್ಕಿನ ದ್ವಾರಗಳು ಮುಚ್ಚಿರುತ್ತವೆ. ಪೂರ್ವ ವಲಯದ ಇನ್ನಾವುದೇ ಸ್ಥಳದಲ್ಲಿ ‘ಛತ್ ಪೂಜೆ’ಗೆ ವ್ಯವಸ್ಥೆ ಕಲ್ಪಿಸಿರುವುದಿಲ್ಲ ಎಂದು ವಲಯ ಆಯುಕ್ತೆ ಆರ್. ಸ್ನೇಹಲ್ ತಿಳಿಸಿದ್ದಾರೆ.