ಕಾರ್ಯನಿರ್ವಹಿಸದ ಕನ್ನಡ ಭವನದ ಲಿಫ್ಟ್
ಕನ್ನಡ ಭವದಲ್ಲಿನ ಎರಡೂ ಲಿಫ್ಟ್ಗಳೂ ಕೆಟ್ಟು ಹೋಗಿದ್ದವು. ಕನ್ನಡ ಭವನದ ಎರಡನೇ ಮಹಡಿಯಲ್ಲಿರುವ ವರ್ಣ ಆರ್ಟ್ ಗ್ಯಾಲರಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಪೋಷಕ ಕಲಾವಿದರು ಪರದಾಟ ನಡೆಸಿದರು. ಎಂ.ಎನ್. ಲಕ್ಷ್ಮೀದೇವಿ ಮೊದಲಾದವರು ಏದುಸಿರು ಬಿಡುತ್ತಾ ಎರಡು ಮಹಡಿಗಳನ್ನು ಹತ್ತಿದರು. ಕನ್ನಡ ಭವನದಲ್ಲಿನ ವ್ಯವಸ್ಥೆಯ ಬಗ್ಗೆಯೂ ಪೋಷಕ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದರು.