ಎಚ್ಎಸ್ಬಿಸಿಯಿಂದ ಅರಕೆರೆ ಮಾರ್ಗದಲ್ಲಿ ಮೆಟ್ರೊ ಕೆಲಸ ನಡೆಯುತ್ತಿದೆ. ಆ ರಸ್ತೆಯಲ್ಲಿ ವಾಹನಗಳ ಓಡಾಟ ನಿರ್ಬಂಧಿಸಲಾಗಿತ್ತು. ಬೈಕ್ ಸವಾರನೊಬ್ಬ, ಆ ರಸ್ತೆಯಲ್ಲೇ ತೆರಳಲು ಮುಂದಾಗಿದ್ದ. ಆತನನ್ನು ಅನಂತ್ ತಡೆದಿದ್ದರು. ಅಷ್ಟಕ್ಕೆ ಕೋಪಗೊಂಡ ಸವಾರ, ಅನಂತ್ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಕೈಗೆ ಇರಿದುಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಂತ್ ಅವರನ್ನು ಸಿಬ್ಬಂದಿಯೇ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಕೊಲೆಗೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.