‘ಇತ್ತೀಚೆಗೆ ಬೇರೆ ಯುವತಿಯನ್ನು ಮಧುಚಂದ್ರ ಮದುವೆಯಾಗಿದ್ದ. ಈ ವಿಷಯ ಮುಚ್ಚಿಟ್ಟು ರಾಶಿ ಜೊತೆ ಮಾತನಾಡುತ್ತಿದ್ದ. ಮದುವೆ ವಿಷಯ ಗೊತ್ತಾಗುತ್ತಿದ್ದಂತೆ ರಾಶಿ, ಆರೋಪಿಯಿಂದ ದೂರವಿರಲು ಯತ್ನಿಸಿದ್ದರು. ಇಷ್ಟಕ್ಕೆ ಕೋಪಗೊಂಡ ಆರೋಪಿ, ತನ್ನೊಂದಿಗೆ ಸಲುಗೆ ಮುಂದುವರಿಸುವಂತೆ ಪೀಡಿಸಲಾರಂಭಿಸಿದ್ದ. ಸಲುಗೆ ಮುಂದುವರಿಸಲು ಯುವತಿ ನಿರಾಕರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.