<p><strong>ರಾಜರಾಜೇಶ್ವರಿನಗರ:</strong> ‘ತ್ಯಾಗ, ಬಲಿದಾನ, ಮಾನವೀಯ ಮೌಲ್ಯ, ಸಹೋದರತ್ವ, ಶಾಂತಿಯ ಸಂಕೇತ ಮತ್ತು ಎಲ್ಲರೂ ಒಗ್ಗೂಡಿ ಜೀವನ ಸಾಗಿಸುವ ಹಬ್ಬವೇ ಬಕ್ರೀದ್’ ಎಂದು ಮೌಲಾನ ಶೇಕ್ ಜಾಹೀರ್ ಅಹಮದ್ ತಿಳಿಸಿದರು.</p>.<p>ಮತ್ತಿಕೆರೆಯ ಜೆ.ಪಿ.ಪಾರ್ಕ್ ಆಟದ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಮಸ್ಜಿದ್-ಎ-ತಾಹ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆ ನಂತರ ಅವರು ಮಾತನಾಡಿದರು.</p>.<p>‘ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮಕ್ಕಳನ್ನು ಹತೋಟಿಯಲ್ಲಿಟ್ಟುಕೊಂಡು ಸಂಸ್ಕಾರವಂತರಾಗಿ ರೂಪಿಸಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಮಕ್ಕಳು ಬಾಲ್ಯದಲ್ಲಿಯೇ ಪ್ರೀತಿ, ವಿಶ್ವಾಸ ವೃದ್ದಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕಾಗಿದೆ’ ಎಂದರು.</p>.<p>ಮಸ್ಜಿದ್-ಎ-ತಾಹಾದ ಅಧ್ಯಕ್ಷ ಸಮೀಉಲ್ಲಾ ಖಾನ್, ‘ನಮ್ಮ ಮಸೀದಿಯಲ್ಲಿ ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡ ಗ್ರಂಥಾಲಯವನ್ನು ಸ್ಥಾಪಿಸಿದ್ದೇವೆ’ ಎಂದರು.</p>.<p>ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ, ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ ಮೃತರಾದ 11 ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ‘ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ’ ಎಂದು ಪ್ರಾರ್ಥಿಸಲಾಯಿತು.</p>.<p>ಮಸ್ಜಿದ್ ಎ ತಾಹದ ಉಪಾಧ್ಯಕ್ಷ ಅಮೀರ್, ಕಾರ್ಯದರ್ಶಿ ಶಹಜಹಾನ್, ಖಜಾಂಚಿ ಸಾಗರ್ ಸಮೀಉಲ್ಲಾ, ಬೈತುಲ್ ಮಾಲ್ ಕಮಿಟಿಯ ಅಧ್ಯಕ್ಷ ನಜೀರ್, ಕಾರ್ಯದರ್ಶಿ ಬಶೀರ್ ಉಲ್ಲಾ ಬೇ, ಕೋಶಾಧ್ಯಕ್ಷ ಫಯಾಜ್, ದಸ್ತಗಿರ್ ಷರೀಫ್, ಮಹಮ್ಮದ್ ಫಕ್ರುದ್ದೀನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ:</strong> ‘ತ್ಯಾಗ, ಬಲಿದಾನ, ಮಾನವೀಯ ಮೌಲ್ಯ, ಸಹೋದರತ್ವ, ಶಾಂತಿಯ ಸಂಕೇತ ಮತ್ತು ಎಲ್ಲರೂ ಒಗ್ಗೂಡಿ ಜೀವನ ಸಾಗಿಸುವ ಹಬ್ಬವೇ ಬಕ್ರೀದ್’ ಎಂದು ಮೌಲಾನ ಶೇಕ್ ಜಾಹೀರ್ ಅಹಮದ್ ತಿಳಿಸಿದರು.</p>.<p>ಮತ್ತಿಕೆರೆಯ ಜೆ.ಪಿ.ಪಾರ್ಕ್ ಆಟದ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಮಸ್ಜಿದ್-ಎ-ತಾಹ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆ ನಂತರ ಅವರು ಮಾತನಾಡಿದರು.</p>.<p>‘ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮಕ್ಕಳನ್ನು ಹತೋಟಿಯಲ್ಲಿಟ್ಟುಕೊಂಡು ಸಂಸ್ಕಾರವಂತರಾಗಿ ರೂಪಿಸಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಮಕ್ಕಳು ಬಾಲ್ಯದಲ್ಲಿಯೇ ಪ್ರೀತಿ, ವಿಶ್ವಾಸ ವೃದ್ದಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕಾಗಿದೆ’ ಎಂದರು.</p>.<p>ಮಸ್ಜಿದ್-ಎ-ತಾಹಾದ ಅಧ್ಯಕ್ಷ ಸಮೀಉಲ್ಲಾ ಖಾನ್, ‘ನಮ್ಮ ಮಸೀದಿಯಲ್ಲಿ ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡ ಗ್ರಂಥಾಲಯವನ್ನು ಸ್ಥಾಪಿಸಿದ್ದೇವೆ’ ಎಂದರು.</p>.<p>ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ, ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ ಮೃತರಾದ 11 ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ‘ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ’ ಎಂದು ಪ್ರಾರ್ಥಿಸಲಾಯಿತು.</p>.<p>ಮಸ್ಜಿದ್ ಎ ತಾಹದ ಉಪಾಧ್ಯಕ್ಷ ಅಮೀರ್, ಕಾರ್ಯದರ್ಶಿ ಶಹಜಹಾನ್, ಖಜಾಂಚಿ ಸಾಗರ್ ಸಮೀಉಲ್ಲಾ, ಬೈತುಲ್ ಮಾಲ್ ಕಮಿಟಿಯ ಅಧ್ಯಕ್ಷ ನಜೀರ್, ಕಾರ್ಯದರ್ಶಿ ಬಶೀರ್ ಉಲ್ಲಾ ಬೇ, ಕೋಶಾಧ್ಯಕ್ಷ ಫಯಾಜ್, ದಸ್ತಗಿರ್ ಷರೀಫ್, ಮಹಮ್ಮದ್ ಫಕ್ರುದ್ದೀನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>