<p><strong>ಬೆಂಗಳೂರು:</strong> ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ ಈ ವರ್ಷದಿಂದಲೇ ಆರಂಭವಾಗಲಿದೆ ಎಂದುಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ ತಿಳಿಸಿದರು.</p>.<p>‘ಮೊದಲನೇ ವರ್ಷದ ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮಾತ್ರ ಡಿಜಿಟಲ್ ಮೌಲ್ಯಮಾಪನ ಮಾಡಲಾಗುತ್ತಿದೆ. ಉಳಿದ ತರಗತಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಮೂಲಿನಂತೆ ಈಗಾಗಲೇ ಪೂರ್ಣಗೊಂಡಿದೆ’ ಎಂದುಅವರು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.</p>.<p>‘ಪರೀಕ್ಷೆ ಮುಗಿದು 15 ದಿನಗಳಾಗಿದ್ದು, ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಗುರುವಾರದಿಂದಲೇ ಆರಂಭವಾಗಲಿದೆ. ಪ್ರಥಮ ಪದವಿಯಲ್ಲಿ 30 ಸಾವಿರ ವಿದ್ಯಾರ್ಥಿಗಳಿದ್ದು, 1.50 ಲಕ್ಷ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ 10 ದಿನಗಳಲ್ಲಿ ಮುಗಿಯಲಿದೆ’ ಎಂದರು.</p>.<p>‘ಮೌಲ್ಯಮಾಪನಕ್ಕೆ 10 ಕೇಂದ್ರಗಳನ್ನು ತೆರೆಯಲಾಗುವುದು. ಎಲ್ಲಕಡೆ 50ರಿಂದ 100 ಕಂಪ್ಯೂಟರ್ ಅಳವಡಿಸಲಾಗುತ್ತಿದೆ. ಒಬ್ಬ ಮೌಲ್ಯಮಾಪಕರಿಗೆ ಎರಡು ಮಾನಿಟರ್ ಇರಲಿದ್ದು, ಒಂದರಲ್ಲಿ ಪಿಡಿಎಫ್ ಮಾದರಿಯ ಉತ್ತರ ಪತ್ರಿಕೆ, ಇನ್ನೊಂದರಲ್ಲಿ ಪ್ರಶ್ನೆ ಸಂಖ್ಯೆ ಮುಂದೆ ಅಂಕಗಳನ್ನು ನಮೂದಿಸಲು ಅವಕಾಶ ಇದೆ’ ಎಂದರು.</p>.<p>‘ಈ ಹಿಂದಿನಂತೆ ಒಬ್ಬರು ದಿನಕ್ಕೆ 36 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಿದ್ದಾರೆ.ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಒಳಗೊಂಡ ಮೊದಲ ಪುಟವನ್ನು ಬ್ಲರ್ ಮಾಡುವುದರಿಂದ ಉತ್ತರ ಪತ್ರಿಕೆ ಯಾರದ್ದು ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಅಕ್ರಮಕ್ಕೆ ಅವಕಾಶವೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>‘ಮೌಲ್ಯಮಾಪನ ಮುಗಿದ ನಂತರ ಅಂಕಗಳನ್ನು ಕ್ರೋಡೀಕರಿಸಿ ಫಲಿತಾಂಶ ಪ್ರಕಟಿಸಲು ಹೆಚ್ಚು ಕಾಲಾವಕಾಶ ಹಿಡಿಯುತ್ತಿತ್ತು. ಈಗ ಮೌಲ್ಯಮಾಪನ ಮುಗಿದ ಎರಡೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಒಂದು ತಿಂಗಳು ಮೊದಲೇ ಫಲಿತಾಂಶ ಪ್ರಕಟವಾಗಲಿದೆ’ ಎಂದರು.</p>.<p class="Subhead">ತರಬೇತಿಯನ್ನೇ ನೀಡಿಲ್ಲ: ‘ಡಿಜಿಟಲ್ ಮೌಲ್ಯಮಾಪನ ಮಾಡುವ ಉಪನ್ಯಾಸಕರಿಗೆ ತರಬೇತಿ ನೀಡಿಲ್ಲ, ಅದರ ಅಗತ್ಯವೂ ಇಲ್ಲ’ ಎಂದು ಕುಲಪತಿ ಸ್ಪಷ್ಟಪಡಿಸಿದರು.</p>.<p>‘ಕಂಪ್ಯೂಟರ್ನ ಒಂದು ಪರದೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಓದಬೇಕು. ಇನ್ನೊಂದು ಪರದೆಯಲ್ಲಿ ಅಂಕ ನಮೂದಿಸಬೇಕು. ಇಷ್ಟು ಸುಲಭದ ಕೆಲಸಕ್ಕೆ ತರಬೇತಿ ಬೇಕಿಲ್ಲ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.</p>.<p>‘ಮೌಲ್ಯಮಾಪನ ಆರಂಭವಾಗುವ ದಿನ ಐದು ನಿಮಿಷದ ತರಬೇತಿಯೇ ಸಾಕಾಗುತ್ತದೆ. ಆರಂಭದಲ್ಲಿ ಪ್ರತಿ ಐದು ಮೌಲ್ಯಮಾಪಕರಿಗೆ ಒಬ್ಬ ಕಂಪ್ಯೂಟರ್ ಆಪರೇಟರ್ಗಳು ಇರಲಿದ್ದಾರೆ ಹೀಗಾಗಿ ತೊಂದರೆ ಆಗುವುದಿಲ್ಲ’<br />ಎಂದರು.</p>.<p>‘21 ವರ್ಷಗಳಿಂದ ಮೌಲ್ಯಮಾಪನ ಮಾಡುತ್ತಿದ್ದೇನೆ. ಹೊಸ ಪೀಳಿಗೆಯವರಿಗೆ ಇದು ಸುಲಭವಾಗಬಹುದು. ನಮ್ಮಂತವರು ಏಕಾಏಕಿ ಡಿಜಿಟಲ್ ಮೌಲ್ಯಮಾಪನಕ್ಕೆ ಒಗ್ಗುವುದು ಕಷ್ಟ’ ಎಂದು ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಅಭಿಪ್ರಾಯಪಟ್ಟರು.</p>.<p>‘ಡಿಜಿಟಲ್ ಮೌಲ್ಯಮಾಪನದ ಬಗ್ಗೆ ನಮಗೇನೂ ಗೊತ್ತಿಲ್ಲ. ಈ ಪದ್ಧತಿ ಜಾರಿಗೆ ತರುವ ಮೊದಲುನಮಗೆ ತರಬೇತಿಯನ್ನಾದರೂ ನೀಡಬೇಕಿತ್ತು’ ಎಂದು ಹೇಳಿದರು.</p>.<p class="Subhead"><strong>ಮೌಲ್ಯಮಾಪಕರ ಸಂಭಾವನೆ ಹೆಚ್ಚಳ:</strong> ‘ಮೌಲ್ಯಮಾಪಕರ ಸಂಭಾವನೆ ಹೆಚ್ಚಳಕ್ಕೆ ಚಿಂತಿಸಲಾಗಿದ್ದು, ಎಷ್ಟು ಎಂಬುದನ್ನು ಸೆನೆಟ್ ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದು ಕುಲಪತಿ ಹೇಳಿದರು.</p>.<p>‘ದಿನಕ್ಕೆ 36 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಉಪನ್ಯಾಸಕರಿಗೆ ₹750 ಸಂಭಾವನೆ ನೀಡಲಾಗುತ್ತಿದೆ.12 ವರ್ಷಗಳಿಂದ ಹೆಚ್ಚಳವಾಗಿಲ್ಲ’ ಎಂದು ತಿಳಿಸಿದರು.</p>.<p><strong>ಯೋಗ, ಅಧ್ಯಾತ್ಮ ಕಡ್ಡಾಯ</strong></p>.<p>‘ಯೋಗ, ಅಧ್ಯಾತ್ಮ, ಪರಿಸರ ಸರಂಕ್ಷಣೆ, ತ್ಯಾಜ್ಯ ನಿರ್ವಹಣೆ, ಆಪತ್ತು ನಿರ್ವಹಣೆ ಕುರಿತು ತರಗತಿಗಳನ್ನು ನಡೆಸುವುದು ಕಡ್ಡಾಯಗೊಳಿಸಲಾಗಿದೆ’ ಎಂದು ಕುಲಪತಿ ತಿಳಿಸಿದರು.</p>.<p>‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 270 ಕಾಲೇಜುಗಳಿದ್ದು, ಎಲ್ಲಾ ಪ್ರಾಂಶುಪಾಲರ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ಭಗವಾನ್ ಬುದ್ಧ, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೋಶಗಳನ್ನು ತೆರೆಯಬೇಕು ಎಂದೂ ತಿಳಿಸಲಾಗಿದೆ ಎಂದರು.</p>.<p>‘ಈ ವಿಷಯಗಳ ಬಗ್ಗೆ ವಾರಕ್ಕೆ ಒಂದು ಗಂಟೆಯ ತರಗತಿಯನ್ನಾದರೂ ನಡೆಸಬೇಕು. ಸ್ಥಳೀಯ ಪರಿಶೀಲನಾ ಸಮಿತಿ ಭೇಟಿ ನೀಡುವ ವೇಳೆಗೆ ಈ ಎಲ್ಲವೂ ಪ್ರಗತಿಯಲ್ಲಿ ಇರಬೇಕೆಂದು ಸೂಚನೆ ನೀಡಲಾಗಿದೆ’ ಎಂದು ಹೇಳಿದರು.</p>.<p><strong>ಆನ್ಲೈನ್ನಲ್ಲೇ ಅಂಕಪಟ್ಟಿ</strong></p>.<p>‘ಈ ವರ್ಷದಿಂದ ಬೆಂಗಳೂರು ವಿಶ್ವವಿದ್ಯಾಲಯದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳು ಆನ್ಲೈನ್ನಲ್ಲೇ ಪಡೆದುಕೊಳ್ಳಬಹುದು’ ಎಂದು ಕೆ.ಆರ್. ವೇಣುಗೋಪಾಲ ತಿಳಿಸಿದರು.</p>.<p>2018–19ನೇ ಸಾಲಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ‘ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ’(ಎನ್ಎಡಿ) ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿದೆ. ವಿದ್ಯಾರ್ಥಿಗಳು ಅಲ್ಲಿ ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಂಡರೆ ಪಾಸ್ವರ್ಡ್ ಲಭ್ಯವಾಗುತ್ತದೆ ಎಂದು ವಿವರಿಸಿದರು.</p>.<p>‘2009ರಿಂದ ಈಚೆಗಿನ ಎಲ್ಲಾ ವಿದ್ಯಾರ್ಥಿಗಳ ಅಂಕಪಟ್ಟಿಯನ್ನೂ ಮುಂದಿನ ದಿನಗಳಲ್ಲಿ ಅಪ್ಲೋಡ್ ಮಾಡಲಾಗುವುದು. ಅಂಕಪಟ್ಟಿಯಲ್ಲಿ ದೋಷ, ಕಳವು, ದೃಢೀಕರಣ ಸಮಸ್ಯೆಗಳನ್ನು ಇದರಿಂದ ತಡೆಯಬಹುದು. ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ವಿಶ್ವವಿದ್ಯಾಲಯಕ್ಕೆ ಅಲೆಯುವುದು ತಪ್ಪಲಿದೆ. ರಾಜ್ಯದಲ್ಲಿ ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿರುವ ಮೊದಲ ವಿಶ್ವವಿದ್ಯಾಲಯ ನಮ್ಮದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ ಈ ವರ್ಷದಿಂದಲೇ ಆರಂಭವಾಗಲಿದೆ ಎಂದುಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ ತಿಳಿಸಿದರು.</p>.<p>‘ಮೊದಲನೇ ವರ್ಷದ ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮಾತ್ರ ಡಿಜಿಟಲ್ ಮೌಲ್ಯಮಾಪನ ಮಾಡಲಾಗುತ್ತಿದೆ. ಉಳಿದ ತರಗತಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಮೂಲಿನಂತೆ ಈಗಾಗಲೇ ಪೂರ್ಣಗೊಂಡಿದೆ’ ಎಂದುಅವರು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.</p>.<p>‘ಪರೀಕ್ಷೆ ಮುಗಿದು 15 ದಿನಗಳಾಗಿದ್ದು, ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಗುರುವಾರದಿಂದಲೇ ಆರಂಭವಾಗಲಿದೆ. ಪ್ರಥಮ ಪದವಿಯಲ್ಲಿ 30 ಸಾವಿರ ವಿದ್ಯಾರ್ಥಿಗಳಿದ್ದು, 1.50 ಲಕ್ಷ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ 10 ದಿನಗಳಲ್ಲಿ ಮುಗಿಯಲಿದೆ’ ಎಂದರು.</p>.<p>‘ಮೌಲ್ಯಮಾಪನಕ್ಕೆ 10 ಕೇಂದ್ರಗಳನ್ನು ತೆರೆಯಲಾಗುವುದು. ಎಲ್ಲಕಡೆ 50ರಿಂದ 100 ಕಂಪ್ಯೂಟರ್ ಅಳವಡಿಸಲಾಗುತ್ತಿದೆ. ಒಬ್ಬ ಮೌಲ್ಯಮಾಪಕರಿಗೆ ಎರಡು ಮಾನಿಟರ್ ಇರಲಿದ್ದು, ಒಂದರಲ್ಲಿ ಪಿಡಿಎಫ್ ಮಾದರಿಯ ಉತ್ತರ ಪತ್ರಿಕೆ, ಇನ್ನೊಂದರಲ್ಲಿ ಪ್ರಶ್ನೆ ಸಂಖ್ಯೆ ಮುಂದೆ ಅಂಕಗಳನ್ನು ನಮೂದಿಸಲು ಅವಕಾಶ ಇದೆ’ ಎಂದರು.</p>.<p>‘ಈ ಹಿಂದಿನಂತೆ ಒಬ್ಬರು ದಿನಕ್ಕೆ 36 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಿದ್ದಾರೆ.ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಒಳಗೊಂಡ ಮೊದಲ ಪುಟವನ್ನು ಬ್ಲರ್ ಮಾಡುವುದರಿಂದ ಉತ್ತರ ಪತ್ರಿಕೆ ಯಾರದ್ದು ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಅಕ್ರಮಕ್ಕೆ ಅವಕಾಶವೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>‘ಮೌಲ್ಯಮಾಪನ ಮುಗಿದ ನಂತರ ಅಂಕಗಳನ್ನು ಕ್ರೋಡೀಕರಿಸಿ ಫಲಿತಾಂಶ ಪ್ರಕಟಿಸಲು ಹೆಚ್ಚು ಕಾಲಾವಕಾಶ ಹಿಡಿಯುತ್ತಿತ್ತು. ಈಗ ಮೌಲ್ಯಮಾಪನ ಮುಗಿದ ಎರಡೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಒಂದು ತಿಂಗಳು ಮೊದಲೇ ಫಲಿತಾಂಶ ಪ್ರಕಟವಾಗಲಿದೆ’ ಎಂದರು.</p>.<p class="Subhead">ತರಬೇತಿಯನ್ನೇ ನೀಡಿಲ್ಲ: ‘ಡಿಜಿಟಲ್ ಮೌಲ್ಯಮಾಪನ ಮಾಡುವ ಉಪನ್ಯಾಸಕರಿಗೆ ತರಬೇತಿ ನೀಡಿಲ್ಲ, ಅದರ ಅಗತ್ಯವೂ ಇಲ್ಲ’ ಎಂದು ಕುಲಪತಿ ಸ್ಪಷ್ಟಪಡಿಸಿದರು.</p>.<p>‘ಕಂಪ್ಯೂಟರ್ನ ಒಂದು ಪರದೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಓದಬೇಕು. ಇನ್ನೊಂದು ಪರದೆಯಲ್ಲಿ ಅಂಕ ನಮೂದಿಸಬೇಕು. ಇಷ್ಟು ಸುಲಭದ ಕೆಲಸಕ್ಕೆ ತರಬೇತಿ ಬೇಕಿಲ್ಲ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.</p>.<p>‘ಮೌಲ್ಯಮಾಪನ ಆರಂಭವಾಗುವ ದಿನ ಐದು ನಿಮಿಷದ ತರಬೇತಿಯೇ ಸಾಕಾಗುತ್ತದೆ. ಆರಂಭದಲ್ಲಿ ಪ್ರತಿ ಐದು ಮೌಲ್ಯಮಾಪಕರಿಗೆ ಒಬ್ಬ ಕಂಪ್ಯೂಟರ್ ಆಪರೇಟರ್ಗಳು ಇರಲಿದ್ದಾರೆ ಹೀಗಾಗಿ ತೊಂದರೆ ಆಗುವುದಿಲ್ಲ’<br />ಎಂದರು.</p>.<p>‘21 ವರ್ಷಗಳಿಂದ ಮೌಲ್ಯಮಾಪನ ಮಾಡುತ್ತಿದ್ದೇನೆ. ಹೊಸ ಪೀಳಿಗೆಯವರಿಗೆ ಇದು ಸುಲಭವಾಗಬಹುದು. ನಮ್ಮಂತವರು ಏಕಾಏಕಿ ಡಿಜಿಟಲ್ ಮೌಲ್ಯಮಾಪನಕ್ಕೆ ಒಗ್ಗುವುದು ಕಷ್ಟ’ ಎಂದು ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಅಭಿಪ್ರಾಯಪಟ್ಟರು.</p>.<p>‘ಡಿಜಿಟಲ್ ಮೌಲ್ಯಮಾಪನದ ಬಗ್ಗೆ ನಮಗೇನೂ ಗೊತ್ತಿಲ್ಲ. ಈ ಪದ್ಧತಿ ಜಾರಿಗೆ ತರುವ ಮೊದಲುನಮಗೆ ತರಬೇತಿಯನ್ನಾದರೂ ನೀಡಬೇಕಿತ್ತು’ ಎಂದು ಹೇಳಿದರು.</p>.<p class="Subhead"><strong>ಮೌಲ್ಯಮಾಪಕರ ಸಂಭಾವನೆ ಹೆಚ್ಚಳ:</strong> ‘ಮೌಲ್ಯಮಾಪಕರ ಸಂಭಾವನೆ ಹೆಚ್ಚಳಕ್ಕೆ ಚಿಂತಿಸಲಾಗಿದ್ದು, ಎಷ್ಟು ಎಂಬುದನ್ನು ಸೆನೆಟ್ ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದು ಕುಲಪತಿ ಹೇಳಿದರು.</p>.<p>‘ದಿನಕ್ಕೆ 36 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಉಪನ್ಯಾಸಕರಿಗೆ ₹750 ಸಂಭಾವನೆ ನೀಡಲಾಗುತ್ತಿದೆ.12 ವರ್ಷಗಳಿಂದ ಹೆಚ್ಚಳವಾಗಿಲ್ಲ’ ಎಂದು ತಿಳಿಸಿದರು.</p>.<p><strong>ಯೋಗ, ಅಧ್ಯಾತ್ಮ ಕಡ್ಡಾಯ</strong></p>.<p>‘ಯೋಗ, ಅಧ್ಯಾತ್ಮ, ಪರಿಸರ ಸರಂಕ್ಷಣೆ, ತ್ಯಾಜ್ಯ ನಿರ್ವಹಣೆ, ಆಪತ್ತು ನಿರ್ವಹಣೆ ಕುರಿತು ತರಗತಿಗಳನ್ನು ನಡೆಸುವುದು ಕಡ್ಡಾಯಗೊಳಿಸಲಾಗಿದೆ’ ಎಂದು ಕುಲಪತಿ ತಿಳಿಸಿದರು.</p>.<p>‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 270 ಕಾಲೇಜುಗಳಿದ್ದು, ಎಲ್ಲಾ ಪ್ರಾಂಶುಪಾಲರ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ಭಗವಾನ್ ಬುದ್ಧ, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೋಶಗಳನ್ನು ತೆರೆಯಬೇಕು ಎಂದೂ ತಿಳಿಸಲಾಗಿದೆ ಎಂದರು.</p>.<p>‘ಈ ವಿಷಯಗಳ ಬಗ್ಗೆ ವಾರಕ್ಕೆ ಒಂದು ಗಂಟೆಯ ತರಗತಿಯನ್ನಾದರೂ ನಡೆಸಬೇಕು. ಸ್ಥಳೀಯ ಪರಿಶೀಲನಾ ಸಮಿತಿ ಭೇಟಿ ನೀಡುವ ವೇಳೆಗೆ ಈ ಎಲ್ಲವೂ ಪ್ರಗತಿಯಲ್ಲಿ ಇರಬೇಕೆಂದು ಸೂಚನೆ ನೀಡಲಾಗಿದೆ’ ಎಂದು ಹೇಳಿದರು.</p>.<p><strong>ಆನ್ಲೈನ್ನಲ್ಲೇ ಅಂಕಪಟ್ಟಿ</strong></p>.<p>‘ಈ ವರ್ಷದಿಂದ ಬೆಂಗಳೂರು ವಿಶ್ವವಿದ್ಯಾಲಯದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳು ಆನ್ಲೈನ್ನಲ್ಲೇ ಪಡೆದುಕೊಳ್ಳಬಹುದು’ ಎಂದು ಕೆ.ಆರ್. ವೇಣುಗೋಪಾಲ ತಿಳಿಸಿದರು.</p>.<p>2018–19ನೇ ಸಾಲಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ‘ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ’(ಎನ್ಎಡಿ) ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿದೆ. ವಿದ್ಯಾರ್ಥಿಗಳು ಅಲ್ಲಿ ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಂಡರೆ ಪಾಸ್ವರ್ಡ್ ಲಭ್ಯವಾಗುತ್ತದೆ ಎಂದು ವಿವರಿಸಿದರು.</p>.<p>‘2009ರಿಂದ ಈಚೆಗಿನ ಎಲ್ಲಾ ವಿದ್ಯಾರ್ಥಿಗಳ ಅಂಕಪಟ್ಟಿಯನ್ನೂ ಮುಂದಿನ ದಿನಗಳಲ್ಲಿ ಅಪ್ಲೋಡ್ ಮಾಡಲಾಗುವುದು. ಅಂಕಪಟ್ಟಿಯಲ್ಲಿ ದೋಷ, ಕಳವು, ದೃಢೀಕರಣ ಸಮಸ್ಯೆಗಳನ್ನು ಇದರಿಂದ ತಡೆಯಬಹುದು. ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ವಿಶ್ವವಿದ್ಯಾಲಯಕ್ಕೆ ಅಲೆಯುವುದು ತಪ್ಪಲಿದೆ. ರಾಜ್ಯದಲ್ಲಿ ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿರುವ ಮೊದಲ ವಿಶ್ವವಿದ್ಯಾಲಯ ನಮ್ಮದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>