<p><strong>ಬೆಂಗಳೂರು:</strong> ‘ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು, ಬುಡಕಟ್ಟು ಜನರು ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯ ವಾಗಿದೆ’ ಎಂದು ಶಾಮಪ್ರಸಾದ್ ಮುಖರ್ಜಿ ಸಂಶೋಧನಾ ಫೌಂಡೇಷನ್ ಅಧ್ಯಕ್ಷ ಅನಿರ್ಬನ್ ಗಂಗೂಲಿ ಅವರು ತಿಳಿಸಿದರು.</p><p>ಮಂಥನ ಬೆಂಗಳೂರು ವತಿಯಿಂದ ‘ಬಾಂಗ್ಲಾದೇಶದಲ್ಲಿನ ಹಿಂದೂಗಳು: ವರ್ತಮಾನದ ಸ್ಥಿತಿಗತಿ, ಸವಾಲುಗಳು ಮತ್ತು ಮುಂದಿನ ಹಾದಿ’ ವಿಷಯದ ಕುರಿತು ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>‘ಅಲ್ಪಸಂಖ್ಯಾತರ ಮೇಲೆ ಕೆಲವೇ ತಿಂಗಳಲ್ಲಿ 2000ಕ್ಕೂ ಅಧಿಕ ಆಕ್ರಮಣಗಳಾಗಿವೆ. ಚರ್ಚ್ಗಳ ಮೇಲೆ ದಾಳಿಗಳಾಗಿವೆ. ಬೌದ್ಧರ ಗ್ರಾಮಗಳಲ್ಲೂ ದಾಳಿ ನಡೆಸಿ ಹಿಂಸಿಸಲಾಗಿದೆ. ಬುಡಕಟ್ಟು ಸಮುದಾಯಗಳ ಮೇಲೆ ದಾಳಿ ನಡೆಸಿ ಅವರ ಜಮೀನುಗಳನ್ನು ಅತಿಕ್ರಮಿಸಲಾಗಿದೆ’ ಎಂದು ಹೇಳಿದರು.</p><p>‘ಅಲ್ಲಿನ ವಿಶ್ವವಿದ್ಯಾಲಯ ಕುಲಪತಿಗಳು, ಸಹಕುಲಪತಿಗಳು ಹಿಂದೂಗಳಾಗಿದ್ದಲ್ಲಿ ಅವರಿಗೆ ಬಂದೂಕು ತೋರಿಸಿ ರಾಜೀನಾಮೆ ಕೊಡಿಸಲಾಗಿದೆ. ಬೇರೆ ಬೇರೆ ಶೈಕ್ಷಣಿಕ ಸಂಸ್ಥೆಗಳಲ್ಲಿ 1500ಕ್ಕೂ ಅಧಿಕ ಶಿಕ್ಷಕರ ರಾಜೀನಾಮೆ ಪಡೆಯಲಾಗಿದೆ. ಪೊಲೀಸ್ ಇಲಾಖೆಯಲ್ಲಿರುವ ಹಿಂದೂಗಳನ್ನು ಅಮಾನತು ಮಾಡಲಾಗಿದೆ. ದುರ್ಗಾಪೂಜೆಗಳನ್ನು ನಿಯಂತ್ರಿಸಲಾಗಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು, ಬುಡಕಟ್ಟು ಜನರು ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯ ವಾಗಿದೆ’ ಎಂದು ಶಾಮಪ್ರಸಾದ್ ಮುಖರ್ಜಿ ಸಂಶೋಧನಾ ಫೌಂಡೇಷನ್ ಅಧ್ಯಕ್ಷ ಅನಿರ್ಬನ್ ಗಂಗೂಲಿ ಅವರು ತಿಳಿಸಿದರು.</p><p>ಮಂಥನ ಬೆಂಗಳೂರು ವತಿಯಿಂದ ‘ಬಾಂಗ್ಲಾದೇಶದಲ್ಲಿನ ಹಿಂದೂಗಳು: ವರ್ತಮಾನದ ಸ್ಥಿತಿಗತಿ, ಸವಾಲುಗಳು ಮತ್ತು ಮುಂದಿನ ಹಾದಿ’ ವಿಷಯದ ಕುರಿತು ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>‘ಅಲ್ಪಸಂಖ್ಯಾತರ ಮೇಲೆ ಕೆಲವೇ ತಿಂಗಳಲ್ಲಿ 2000ಕ್ಕೂ ಅಧಿಕ ಆಕ್ರಮಣಗಳಾಗಿವೆ. ಚರ್ಚ್ಗಳ ಮೇಲೆ ದಾಳಿಗಳಾಗಿವೆ. ಬೌದ್ಧರ ಗ್ರಾಮಗಳಲ್ಲೂ ದಾಳಿ ನಡೆಸಿ ಹಿಂಸಿಸಲಾಗಿದೆ. ಬುಡಕಟ್ಟು ಸಮುದಾಯಗಳ ಮೇಲೆ ದಾಳಿ ನಡೆಸಿ ಅವರ ಜಮೀನುಗಳನ್ನು ಅತಿಕ್ರಮಿಸಲಾಗಿದೆ’ ಎಂದು ಹೇಳಿದರು.</p><p>‘ಅಲ್ಲಿನ ವಿಶ್ವವಿದ್ಯಾಲಯ ಕುಲಪತಿಗಳು, ಸಹಕುಲಪತಿಗಳು ಹಿಂದೂಗಳಾಗಿದ್ದಲ್ಲಿ ಅವರಿಗೆ ಬಂದೂಕು ತೋರಿಸಿ ರಾಜೀನಾಮೆ ಕೊಡಿಸಲಾಗಿದೆ. ಬೇರೆ ಬೇರೆ ಶೈಕ್ಷಣಿಕ ಸಂಸ್ಥೆಗಳಲ್ಲಿ 1500ಕ್ಕೂ ಅಧಿಕ ಶಿಕ್ಷಕರ ರಾಜೀನಾಮೆ ಪಡೆಯಲಾಗಿದೆ. ಪೊಲೀಸ್ ಇಲಾಖೆಯಲ್ಲಿರುವ ಹಿಂದೂಗಳನ್ನು ಅಮಾನತು ಮಾಡಲಾಗಿದೆ. ದುರ್ಗಾಪೂಜೆಗಳನ್ನು ನಿಯಂತ್ರಿಸಲಾಗಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>