ಈ ಕುರಿತಂತೆ ವಕೀಲ ಎಲ್. ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾ ಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಲೇವಾರಿ ಮಾಡಿದೆ. ವಿಚಾರಣೆ ವೇಳೆ ಆರ್ಬಿಐ ಪರ ವಕೀಲರು ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿ, ‘ಬ್ಯಾಂಕಿನ ಸೇವೆಗಳ ಕುರಿತಂತೆ ಆರ್ಬಿಐ 2015ರ ಜುಲೈ 1ರಂದು ಮಾಸ್ಟರ್ ಸರ್ಕ್ಯುಲರ್ ಹೊರಡಿಸಿದೆ. ಇದರಲ್ಲಿ ಉಲ್ಲೇಖಿಸಿರುವ ಸೇವೆಗಳನ್ನು ಒದಗಿಸಲು ನಿರಾಕರಿಸಿದರೆ, ದೂರು ನೀಡುವುದಕ್ಕೆ ಓಂಬುಡನ್ಸ್ಮನ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.