‘2015-16ನೇ ಸಾಲಿನಿಂದ 2019-2020ರ ವರೆಗೆ ಯೋಗಾನಂದ್ ಸಿಇಒ ಆಗಿದ್ದರು. ಪತ್ನಿ ಅನ್ನಪೂರ್ಣ ಅಧ್ಯಕ್ಷರಾಗಿದ್ದರು. ಉಳಿದ ಆರೋಪಿಗಳು ಸದಸ್ಯರಾಗಿದ್ದರು. ಇದೇ ಅವಧಿಯಲ್ಲಿ ಯೋಗಾನಂದ್, ₹ 7.90 ಕೋಟಿ ಸಾಲ ಪಡೆದಿದ್ದರು. ಆದರೆ, ಸಾಲದ ಹಣಕ್ಕೆ ಈವರೆಗೂ ಬಡ್ಡಿ ಲೆಕ್ಕ ಸೇರಿಸಿಲ್ಲ. ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರು ಸಾಲ ವಸೂಲಾತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಯೋಗಾನಂದ ವೈಯಕ್ತಿಕ ವ್ಯವಹಾರಕ್ಕೆ ಅಧಿಕಾರ ದುರುಪಯೋಗಪಡಿಸಿಕೊಂಡು, ಠೇವಣಿದಾರರ ಶೇ 90 ಹಣ ಪಡೆದುಕೊಂಡಿದ್ದಾರೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿದರು.