ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಮೇಯರ್, ‘1976ರ ಕೆಎಂಸಿ ಕಾಯ್ದೆ ಪ್ರಕಾರ ಜಾಹೀರಾತು ಫಲಕಗಳನ್ನು ಅಳವಡಿಸುವ ಕಟ್ಟಡ ಸ್ವಾಧೀನಾನುಭವ ಪತ್ರ ಪಡೆದಿರುವುದು ಕಡ್ಡಾಯ. ಆದರೆ, ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ನಿಯಮಗಳಲ್ಲಿ ಇದರ ಉ್ಲಲೇಖವೇ ಇಲ್ಲ. ಇದು ಕೆಎಂಸಿ ಕಾಯ್ದೆಗೆ ವಿರುದ್ಧವಾಗಿದೆ. ಅಲ್ಲದೇ, 2006ರ ಬೈಲಾದಲ್ಲಿ ನಿಗದಿಪಡಿಸಿದ್ದಕ್ಕಿಂತ ಕಡಿಮೆಪ್ರಮಾಣದ ಶುಲ್ಕದ ನಿಗದಿ ಮಾಡಲಾಗಿದೆ. ಇದು ಪಾಲಿಕೆಗೆ ಆರ್ಥಿಕವಾಗಿ ಹಾನಿಯುಂಟು ಮಾಡಲಿದೆ’ ಎಂದು ಗಮನ ಸೆಳೆದಿದ್ದಾರೆ.