‘ಸ್ಮಾರ್ಟ್ಸಿಟಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿರುವ ಕೆಲವು ರಸ್ತೆಗಳ ಮೇಲ್ಪದರ ಇತ್ತೀಚಿನ ಮಳೆಯಿ೦ದಾಗಿ ಹಾಳಾಗಿದೆ. ಅನೇಕ ಕಡೆ ಈ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯದೆಯೇ ವಾಹನ ಸ೦ಚಾರಕ್ಕೆ ತೊ೦ದರೆ ಉಂಟಾಗುತ್ತಿದೆ. ಕೆಲವು ರಸ್ತೆಗಳ ತಳಮಟ್ಟದ ಜಲ್ಲಿ–ಡಾಂಬರಿನ ದಟ್ಟ ಮಿಶ್ರಣವು ಡಾಂಬರೀಕರಣ ಕಾಮಗಾರಿ ವಿಳ೦ಬದಿಂದಾಗಿ ಕಿತ್ತು ಹೋಗುತ್ತಿದೆ. ಇದನ್ನು ಸರಿಪಡಿಸಿ ಕೂಡಲೇ ಮೇಲ್ಪದರದ ಡಾಂಬರೀಕರಣ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.