ದಾಸರಹಳ್ಳಿಯಲ್ಲಿದ್ದ ಕಂದಾಯ ಅಧಿಕಾರಿ ಎಸ್.ಆರ್. ಪ್ರಕಾಶ್ ಅವರನ್ನು ಕೆಂಗೇರಿ, ಸರ್ವಜ್ಞನಗರದಲ್ಲಿದ್ದ ಉಪಕಂದಾಯ ಅಧಿಕಾರಿ ನಾರಾಯಣಸ್ವಾಮಿ ಅವರನ್ನು ಕೆ.ಆರ್. ಪುರ, ಪುಲಿಕೇಶಿನಗರದಲ್ಲಿದ್ದ ಉಪ ಕಂದಾಯ ಅಧಿಕಾರಿ ಡಿ. ಸರಸ್ವತಿ ಅವರನ್ನು ಮಲ್ಲೇಶ್ವರಕ್ಕೆ ವರ್ಗಾವಣೆ ಮಾಡಲಾಗಿದೆ. ಇವರು ನಿಯೋಜಿಸಲಾಗಿರುವ ಸ್ಥಳದಲ್ಲಿ ಮತದಾರ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ. ಆದರೆ ಈ ಮೂವರನ್ನು ಅವರು ವಾಸವಿರುವ ವಿಧಾನಸಭೆ ಕ್ಷೇತ್ರಕ್ಕೇ ವರ್ಗಾಯಿಸಿರುವುದು ಕೇಂದ್ರ ಚುನಾವಣೆ ಆಯೋಗದ ಮಾರ್ಗಸೂಚಿಗೆ ವಿರುದ್ಧವಾಗಿದೆ.