<p><strong>ಬೆಂಗಳೂರು:</strong> ಬಿಬಿಎಂಪಿಯ 198 ವಾರ್ಡ್ಗಳಲ್ಲಿ 2020ರ ಆ.1ರಿಂದ 2021ರ ಸೆ. 4ರವರೆಗೆ ಒಟ್ಟು 4,219 ವಾರ್ಡ್ ಸಮಿತಿ ಸಭೆಗಳು ನಡೆದಿವೆ.</p>.<p>ವಾರ್ಡ್ ಸಮಿತಿ ಸಭೆಗಳ ಕುರಿತು ಜನಾಗ್ರಹ ಸಂಸ್ಥೆ ವಿಶ್ಲೇಷಣೆ ನಡೆಸಿದೆ. ಈ ವಿಶ್ಲೇಷಣೆಯ ಮುಖ್ಯಾಂಶಗಳನ್ನು ಶನಿವಾರ ಏರ್ಪಡಿಸಿದ್ದ ವಾರ್ಡ್ ಸಮಿತಿ ಕಾರ್ಯಾಗಾರದಲ್ಲಿ ಬಿಡುಗಡೆ ಮಾಡಲಾಯಿತು.</p>.<p>ಪ್ರತಿಯೊಂದು ವಾರ್ಡ್ ಸಮಿತಿಗೆ ನೀಡಲಾದ ತಲಾ ₹60 ಲಕ್ಷ ಅನುದಾನವನ್ನು ಹೇಗೆ ಬಳಸಬಹುದು ಎನ್ನುವ ಮಾಹಿತಿಯನ್ನು ಕಾರ್ಯಾಗಾರದಲ್ಲಿ ಒದಗಿಸಲಾಯಿತು. ವಾರ್ಡ್ ಸಮಿತಿಯಲ್ಲಿ ಭಾಗವಹಿಸಿದ ಅನುಭವಗಳನ್ನು ನಾಗರಿಕರು ಹಂಚಿಕೊಂಡರು.</p>.<p>ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ‘ನಾಗರಿಕರ ಸಹಭಾಗಿತ್ವ ದಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ. ಬಿಬಿಎಂಪಿಯು ಪ್ರತಿ ವಾರ್ಡ್ಗೆ ₹60 ಲಕ್ಷ ಅನುದಾನ ನೀಡಿದೆ. ಇದನ್ನು ರಸ್ತೆ ಗುಂಡಿಗಳನ್ನು ಮುಚ್ಚಲು, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಮತ್ತು ಕೊಳವೆಬಾವಿಗಳ ನಿರ್ಮಾಣಕ್ಕೆ ಬಳಸಲಾಗಿದೆ’ ಎಂದು ವಿವರಿಸಿದರು.</p>.<p>ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಉಪ ಆಯುಕ್ತರಾಗಿರುವ ಗೊಟ್ಟಿಗೆರೆ ವಾರ್ಡ್ನ ನೋಡಲ್ ಅಧಿಕಾರಿ ರಮಾಮಣಿ, ‘ಯಾವುದೇ ಸಭೆ ನಡೆಯುವ ಮೊದಲು ಕಾರ್ಯಸೂಚಿ ತಯಾರಿಸಬೇಕು. ಸಭೆಗಳನ್ನು ನಿಯಮಿತವಾಗಿ ನಡೆಸಿದರೆ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.</p>.<p>ಸಮೀಕ್ಷೆ ಬಗ್ಗೆ ವಿವರಿಸಿದ ಜನಾಗ್ರಹದ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ, ‘ವಾರ್ಡ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಸಭೆಗಳು ಈಗಾಗಲೇ ನಡೆದಿವೆ. ಅನೇಕ ನೋಡಲ್ ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೆಲವೆಡೆ ಮಾತ್ರ ವಾರ್ಡ್ ಸಮಿತಿ ಸಭೆಗಳು ನಡೆದಿಲ್ಲ. ಈ ಮಾಹಿತಿಯು ವಾರ್ಡ್ ಸಮಿತಿಗಳನ್ನು ಬಲಪಡಿಸಲು ಬಿಬಿಎಂಪಿಗೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.</p>.<p>ವಾರ್ಡ್ ಸಮಿತಿಗೆ ಹಂಚಿಕೆ ಮಾಡಲಾದ ₹ 60 ಲಕ್ಷ ಅನುದಾನವನ್ನು ವ್ಯವಸ್ಥಿತವಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಜನಾಗ್ರಹದ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸಪ್ನಾ ಕರೀಂ ವಿವರಿಸಿದರು.</p>.<p><strong>ವಾರ್ಡ್ ಸಮಿತಿ ಸಭೆ–ಪ್ರಮುಖ ಅಂಶಗಳು</strong></p>.<p>lಶೇಕಡ 40ರಷ್ಟು ನೋಡಲ್ ಅಧಿಕಾರಿಗಳು ಮಾತ್ರ ವಾರ್ಡ್ ಸಮಿತಿ ಸಭೆ ಗಳಿಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ಪರಿಣಾಮಕಾರಿ ಉತ್ತರ ನೀಡಿದ್ದಾರೆ.</p>.<p>lಪ್ರತಿ ತಿಂಗಳಲ್ಲಿ ಸರಾಸರಿ 181ರಂತೆ ಸಭೆಗಳು ನಡೆದಿವೆ.</p>.<p>l33 ವಾರ್ಡ್ಗಳಲ್ಲಿ ಪ್ರತಿ ತಿಂಗಳು ಕಡ್ಡಾಯವಾಗಿ ಎರಡು ಸಭೆಗಳನ್ನು ನಡೆಸಲಾಗಿದೆ.</p>.<p>l72 ವಾರ್ಡ್ಗಳಲ್ಲಿ ತಿಂಗಳಿಗೆ ಒಂದು ವಾರ್ಡ್ ಸಮಿತಿ ಸಭೆ ನಡೆಸಲಾಗಿದೆ.</p>.<p>lಹೊಂಬೇಗೌಡ ನಗರ ಮತ್ತು ಗೊಟ್ಟಿಗೆರೆ ವಾರ್ಡ್ಗಳಲ್ಲಿ ಮಾತ್ರ ಶೇಕಡ 100ರಷ್ಟು ಸಭೆಗಳನ್ನು ನಡೆಸಿ ನಡಾವಳಿಗಳನ್ನು ನಿರಂತರವಾಗಿ ಅಪ್ಲೋಡ್ ಮಾಡಲಾಗಿದೆ</p>.<p>lವಸಂತನಗರ, ಕುಮಾರಸ್ವಾಮಿ ಲೇಔಟ್, ದಯಾನಂದನಗರಗಳಲ್ಲಿ 25ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದರೂ ಒಂದೇ ಒಂದು ಸಭೆಯ ವಿವರಗಳನ್ನು ಅಪ್ಲೋಡ್ ಮಾಡಿಲ್ಲ.</p>.<p>l54 ವಾರ್ಡ್ಗಳಲ್ಲಿ 21ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ.</p>.<p>ವಾರ್ಡ್ ಸಮಿತಿ ಸಭೆಗಳ ಮೂಲಕ ನಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಹೆಚ್ಚು ಜನರು ಸಭೆಗಳಲ್ಲಿ ಭಾಗವಹಿಸಬೇಕು. ಆಗ ಮಾತ್ರ ವಾರ್ಡ್ ಸಮಿತಿಗಳು ಕ್ರಿಯಾಶೀಲವಾಗಿರಲು ಸಾಧ್ಯ.</p>.<p>- ಶ್ರೀನಿವಾಸ್, ಥಣಿಸಂದ್ರ ವಾರ್ಡ್ ನಿವಾಸಿ</p>.<p>ನಮ್ಮ ವಾರ್ಡ್ ಸಮಿತಿಯು ಕೇವಲ ವೈಯಕ್ತಿಕ ಸಮಸ್ಯೆಗಳಿಗೆ ಸೀಮಿತಗೊಂಡಿದೆ. ಅನೇಕ ಜನರಿಗೆ ವಾರ್ಡ್ ಸಮಿತಿಗಳ ಬಗ್ಗೆ ಅರಿವು ಇಲ್ಲ. ಈ ಬಗ್ಗೆ ಗಮನಹರಿಸಬೇಕಾಗಿದೆ.</p>.<p>- ಲಲಿತಾ, 18ನೇ ವಾರ್ಡ್ ನಿವಾಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಬಿಎಂಪಿಯ 198 ವಾರ್ಡ್ಗಳಲ್ಲಿ 2020ರ ಆ.1ರಿಂದ 2021ರ ಸೆ. 4ರವರೆಗೆ ಒಟ್ಟು 4,219 ವಾರ್ಡ್ ಸಮಿತಿ ಸಭೆಗಳು ನಡೆದಿವೆ.</p>.<p>ವಾರ್ಡ್ ಸಮಿತಿ ಸಭೆಗಳ ಕುರಿತು ಜನಾಗ್ರಹ ಸಂಸ್ಥೆ ವಿಶ್ಲೇಷಣೆ ನಡೆಸಿದೆ. ಈ ವಿಶ್ಲೇಷಣೆಯ ಮುಖ್ಯಾಂಶಗಳನ್ನು ಶನಿವಾರ ಏರ್ಪಡಿಸಿದ್ದ ವಾರ್ಡ್ ಸಮಿತಿ ಕಾರ್ಯಾಗಾರದಲ್ಲಿ ಬಿಡುಗಡೆ ಮಾಡಲಾಯಿತು.</p>.<p>ಪ್ರತಿಯೊಂದು ವಾರ್ಡ್ ಸಮಿತಿಗೆ ನೀಡಲಾದ ತಲಾ ₹60 ಲಕ್ಷ ಅನುದಾನವನ್ನು ಹೇಗೆ ಬಳಸಬಹುದು ಎನ್ನುವ ಮಾಹಿತಿಯನ್ನು ಕಾರ್ಯಾಗಾರದಲ್ಲಿ ಒದಗಿಸಲಾಯಿತು. ವಾರ್ಡ್ ಸಮಿತಿಯಲ್ಲಿ ಭಾಗವಹಿಸಿದ ಅನುಭವಗಳನ್ನು ನಾಗರಿಕರು ಹಂಚಿಕೊಂಡರು.</p>.<p>ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ‘ನಾಗರಿಕರ ಸಹಭಾಗಿತ್ವ ದಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ. ಬಿಬಿಎಂಪಿಯು ಪ್ರತಿ ವಾರ್ಡ್ಗೆ ₹60 ಲಕ್ಷ ಅನುದಾನ ನೀಡಿದೆ. ಇದನ್ನು ರಸ್ತೆ ಗುಂಡಿಗಳನ್ನು ಮುಚ್ಚಲು, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಮತ್ತು ಕೊಳವೆಬಾವಿಗಳ ನಿರ್ಮಾಣಕ್ಕೆ ಬಳಸಲಾಗಿದೆ’ ಎಂದು ವಿವರಿಸಿದರು.</p>.<p>ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಉಪ ಆಯುಕ್ತರಾಗಿರುವ ಗೊಟ್ಟಿಗೆರೆ ವಾರ್ಡ್ನ ನೋಡಲ್ ಅಧಿಕಾರಿ ರಮಾಮಣಿ, ‘ಯಾವುದೇ ಸಭೆ ನಡೆಯುವ ಮೊದಲು ಕಾರ್ಯಸೂಚಿ ತಯಾರಿಸಬೇಕು. ಸಭೆಗಳನ್ನು ನಿಯಮಿತವಾಗಿ ನಡೆಸಿದರೆ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.</p>.<p>ಸಮೀಕ್ಷೆ ಬಗ್ಗೆ ವಿವರಿಸಿದ ಜನಾಗ್ರಹದ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ, ‘ವಾರ್ಡ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಸಭೆಗಳು ಈಗಾಗಲೇ ನಡೆದಿವೆ. ಅನೇಕ ನೋಡಲ್ ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೆಲವೆಡೆ ಮಾತ್ರ ವಾರ್ಡ್ ಸಮಿತಿ ಸಭೆಗಳು ನಡೆದಿಲ್ಲ. ಈ ಮಾಹಿತಿಯು ವಾರ್ಡ್ ಸಮಿತಿಗಳನ್ನು ಬಲಪಡಿಸಲು ಬಿಬಿಎಂಪಿಗೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.</p>.<p>ವಾರ್ಡ್ ಸಮಿತಿಗೆ ಹಂಚಿಕೆ ಮಾಡಲಾದ ₹ 60 ಲಕ್ಷ ಅನುದಾನವನ್ನು ವ್ಯವಸ್ಥಿತವಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಜನಾಗ್ರಹದ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸಪ್ನಾ ಕರೀಂ ವಿವರಿಸಿದರು.</p>.<p><strong>ವಾರ್ಡ್ ಸಮಿತಿ ಸಭೆ–ಪ್ರಮುಖ ಅಂಶಗಳು</strong></p>.<p>lಶೇಕಡ 40ರಷ್ಟು ನೋಡಲ್ ಅಧಿಕಾರಿಗಳು ಮಾತ್ರ ವಾರ್ಡ್ ಸಮಿತಿ ಸಭೆ ಗಳಿಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ಪರಿಣಾಮಕಾರಿ ಉತ್ತರ ನೀಡಿದ್ದಾರೆ.</p>.<p>lಪ್ರತಿ ತಿಂಗಳಲ್ಲಿ ಸರಾಸರಿ 181ರಂತೆ ಸಭೆಗಳು ನಡೆದಿವೆ.</p>.<p>l33 ವಾರ್ಡ್ಗಳಲ್ಲಿ ಪ್ರತಿ ತಿಂಗಳು ಕಡ್ಡಾಯವಾಗಿ ಎರಡು ಸಭೆಗಳನ್ನು ನಡೆಸಲಾಗಿದೆ.</p>.<p>l72 ವಾರ್ಡ್ಗಳಲ್ಲಿ ತಿಂಗಳಿಗೆ ಒಂದು ವಾರ್ಡ್ ಸಮಿತಿ ಸಭೆ ನಡೆಸಲಾಗಿದೆ.</p>.<p>lಹೊಂಬೇಗೌಡ ನಗರ ಮತ್ತು ಗೊಟ್ಟಿಗೆರೆ ವಾರ್ಡ್ಗಳಲ್ಲಿ ಮಾತ್ರ ಶೇಕಡ 100ರಷ್ಟು ಸಭೆಗಳನ್ನು ನಡೆಸಿ ನಡಾವಳಿಗಳನ್ನು ನಿರಂತರವಾಗಿ ಅಪ್ಲೋಡ್ ಮಾಡಲಾಗಿದೆ</p>.<p>lವಸಂತನಗರ, ಕುಮಾರಸ್ವಾಮಿ ಲೇಔಟ್, ದಯಾನಂದನಗರಗಳಲ್ಲಿ 25ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದರೂ ಒಂದೇ ಒಂದು ಸಭೆಯ ವಿವರಗಳನ್ನು ಅಪ್ಲೋಡ್ ಮಾಡಿಲ್ಲ.</p>.<p>l54 ವಾರ್ಡ್ಗಳಲ್ಲಿ 21ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ.</p>.<p>ವಾರ್ಡ್ ಸಮಿತಿ ಸಭೆಗಳ ಮೂಲಕ ನಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಹೆಚ್ಚು ಜನರು ಸಭೆಗಳಲ್ಲಿ ಭಾಗವಹಿಸಬೇಕು. ಆಗ ಮಾತ್ರ ವಾರ್ಡ್ ಸಮಿತಿಗಳು ಕ್ರಿಯಾಶೀಲವಾಗಿರಲು ಸಾಧ್ಯ.</p>.<p>- ಶ್ರೀನಿವಾಸ್, ಥಣಿಸಂದ್ರ ವಾರ್ಡ್ ನಿವಾಸಿ</p>.<p>ನಮ್ಮ ವಾರ್ಡ್ ಸಮಿತಿಯು ಕೇವಲ ವೈಯಕ್ತಿಕ ಸಮಸ್ಯೆಗಳಿಗೆ ಸೀಮಿತಗೊಂಡಿದೆ. ಅನೇಕ ಜನರಿಗೆ ವಾರ್ಡ್ ಸಮಿತಿಗಳ ಬಗ್ಗೆ ಅರಿವು ಇಲ್ಲ. ಈ ಬಗ್ಗೆ ಗಮನಹರಿಸಬೇಕಾಗಿದೆ.</p>.<p>- ಲಲಿತಾ, 18ನೇ ವಾರ್ಡ್ ನಿವಾಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>