ಪ್ರದೇಶ ಪುನರಾವರ್ತನೆ: ಅಂತಿಮ ಅಧಿಸೂಚನೆಯಲ್ಲಿ ಕೆಲವು ಪ್ರದೇಶಗಳು ಪುನರಾವರ್ತನೆಯಾಗಿವೆ. 188ನೇ ವಾರ್ಡ್ನಲ್ಲಿ (ಯಡಿಯೂರು) ಇರುವ ಪ್ರದೇಶಗಳೇ 189ನೇ ವಾರ್ಡ್ನಲ್ಲಿವೆ. ಕಾಂಗ್ರೆಸ್ಗೆ ಸೇರ್ಪಡೆಯಾಗಿರುವ ಬಿಜೆಪಿಯ ಮಾಜಿ ಪಾಲಿಕೆ ಸದಸ್ಯರಿಗೆ ಅನುಕೂಲ ಮಾಡಿಕೊಡಲು ಪದ್ಮನಾಭನಗರ, ಕೆ.ಆರ್.ಪುರ, ಜಯನಗರ, ಯಶವಂತಪುರ ಸಹಿತ ಹಲವು ವಾರ್ಡ್ಗಳಲ್ಲಿ ಬೂತ್ಗಳನ್ನು ಬದಲಾಯಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ರಮೇಶ್ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.