‘ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಶಿವರಾಮ ಕಾರಂತ ಬಡಾವಣೆಯ ನಿವೇಶನಗಳನ್ನು ಮಾರಾಟ ಮಾಡಲಾಗುವುದಿಲ್ಲ. ಈ ಬಡಾವಣೆಯ ನಿವೇಶನಗಳು ಮಾರಾಟವಾದರೆ ₹7,000 ಕೋಟಿ ಆದಾಯ ಬರುತ್ತದೆ. 3,500ಕ್ಕೂ ಹೆಚ್ಚು ಫ್ಲ್ಯಾಟ್ಗಳ ಮಾರಾಟವೂ ಆಗುತ್ತಿಲ್ಲ. ಹೀಗಾಗಿ, ಪ್ರಥಮ ಬಾರಿಗೆ ಬಿಡಿಎ ತನ್ನ ಮೂಲೆ ನಿವೇಶನಗಳನ್ನು ಅಡವಿಡುತ್ತಿದೆ’ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.