ಬೆಳ್ಳಂದೂರು, ಕಸವನಹಳ್ಳಿ, ಸರ್ಜಾಪುರ ಮುಖ್ಯರಸ್ತೆಗಳನ್ನು ಸ್ವಲ್ಪ ಮಟ್ಟಿಗೆ ದುರಸ್ತಿ ಮಾಡಿದ್ದಾರೆ. ಆದರೆ,ಹರಳೂರು ಶುಭ್ ಎನ್ಕ್ಲೇವ್, ಕಸವನಹಳ್ಳಿಯಲ್ಲಿನ ತುಳಸಿ ಲೇಔಟ್, ಓನರ್ಸ್ ಕೋರ್ಟ್, ಕೆಪಿಸಿ ಲೇಔಟ್, ಸಿಎಸ್ಬಿ ಲೇಔಟ್, ಮೊದಲಿಯಾರ್ ಲೇಔಟ್ ಮತ್ತಿತರ ಬಡಾವಣೆಗಳಲ್ಲಿನ ಒಳ ರಸ್ತೆಗಳು ತೀರಾ ಹದಗೆಟ್ಟಿವೆ. ಆರು ತಿಂಗಳಿನಿಂದ ಇದೇ ಸ್ಥಿತಿ ಇದೆ ಎಂದು ಸ್ಥಳೀಯರು ದೂರುತ್ತಾರೆ.