ಶೇಷಾದ್ರಿಪುರಂ, ವೈಯ್ಯಾಲಿಕಾವಲ್, ಹಲಸೂರುಗೇಟ್, ಅಶೋಕ ನಗರ, ವಿವೇಕನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ, ಚಿನ್ನಾಭರಣ ಕಳವು ಮಾಡಿದ್ದ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 19 ಪ್ರಕರಣಗಳಲ್ಲಿ ₹ 1.5 ಕೋಟಿ ಮೌಲ್ಯದ 2 ಕೆ.ಜಿ 110 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.