<p><strong>ನವದೆಹಲಿ:</strong> ಹಾವು ಕಚ್ಚಿತೆಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಹಾವಿನ ಹೆಡೆಯನ್ನೇ ಕಚ್ಚಿ ತಿಂದಿರುವ ಘಟನೆ ಉತ್ತರ ಪ್ರದೇಶದ ಹರ್ಡೋಯಿ ಜಿಲ್ಲೆಯಲ್ಲಿ ನಡೆದಿದೆ.</p>.<p>ಶುಕ್ಲಾಪುರ ಬಗಾರ್ ಗ್ರಾಮದ ಸೋನೆಲಾಲ್ ಎಂಬಾತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾನೆ. ಆದರೆ ಚಿಕಿತ್ಸೆ ನೀಡಿದ ವೈದ್ಯರು ಈತನಿಗೆ ಹಾವು ಕಚ್ಚಿರುವುದಕ್ಕೆ ದೇಹದಲ್ಲಿ ಯಾವುದೇ ಗುರುತು ಇಲ್ಲ ಎಂದು ಹೇಳಿದ್ದಾನೆ.</p>.<p>‘ಜಾನುವಾರುಗಳಿಗೆ ಹೊಲದಲ್ಲಿ ಮೇವು ಕತ್ತರಿಸುವಾಗ ಹಾವು ಕಚ್ಚಿತು. ಅದು ಅಲ್ಲೇ ಇತ್ತು. ಕೋಪಗೊಂಡ ನಾನು ಹಾವನ್ನು ಹಿಡಿದು ಅದರ ಹೆಡೆಯನ್ನು ಕಚ್ಚಿ ತಿಂದು ನಂತರ ಉಗಿದೆ’ ಎಂದು ಸೊನೆಲಾಲ್ ಹೇಳಿದ್ದಾನೆ.</p>.<p>‘ಹೆಡೆ ತಿಂದ ಬಳಿಕ ಈತ ಪ್ರಜ್ಞಾಹೀನನಾಗಿ ಬಿದ್ದಿದ್ದ. ನಂತರ ಆತನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಪಡೆದ 3 ಗಂಟೆಗಳ ನಂತರ ಆತನಿಗೆ ಪ್ರಜ್ಞೆ ಬಂದಿದೆ. ಅಂದೇ ಮನೆಗೆ ಕಳುಹಿಸಲಾಗಿದೆ. ಆದರೆ ಆತ ಅಸಹಜವಾಗಿ ವರ್ತಿಸುತ್ತಿದ್ದಾನೆ’ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.</p>.<p>‘ಸೋನೆಲಾಲ್ ಮದ್ಯ ವ್ಯಸನಿ, ಕುಡಿದ ಅಮಲಿನಲ್ಲಿಯೇ ಹೀಗೆ ಮಾಡಿರಲು ಸಾಧ್ಯ’ ಎಂದು ಗ್ರಾಮಸ್ಥರು ಹೇಳಿಕೆ ಕೊಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಹಾವು ಕಚ್ಚಿತೆಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಹಾವಿನ ಹೆಡೆಯನ್ನೇ ಕಚ್ಚಿ ತಿಂದಿರುವ ಘಟನೆ ಉತ್ತರ ಪ್ರದೇಶದ ಹರ್ಡೋಯಿ ಜಿಲ್ಲೆಯಲ್ಲಿ ನಡೆದಿದೆ.</p>.<p>ಶುಕ್ಲಾಪುರ ಬಗಾರ್ ಗ್ರಾಮದ ಸೋನೆಲಾಲ್ ಎಂಬಾತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾನೆ. ಆದರೆ ಚಿಕಿತ್ಸೆ ನೀಡಿದ ವೈದ್ಯರು ಈತನಿಗೆ ಹಾವು ಕಚ್ಚಿರುವುದಕ್ಕೆ ದೇಹದಲ್ಲಿ ಯಾವುದೇ ಗುರುತು ಇಲ್ಲ ಎಂದು ಹೇಳಿದ್ದಾನೆ.</p>.<p>‘ಜಾನುವಾರುಗಳಿಗೆ ಹೊಲದಲ್ಲಿ ಮೇವು ಕತ್ತರಿಸುವಾಗ ಹಾವು ಕಚ್ಚಿತು. ಅದು ಅಲ್ಲೇ ಇತ್ತು. ಕೋಪಗೊಂಡ ನಾನು ಹಾವನ್ನು ಹಿಡಿದು ಅದರ ಹೆಡೆಯನ್ನು ಕಚ್ಚಿ ತಿಂದು ನಂತರ ಉಗಿದೆ’ ಎಂದು ಸೊನೆಲಾಲ್ ಹೇಳಿದ್ದಾನೆ.</p>.<p>‘ಹೆಡೆ ತಿಂದ ಬಳಿಕ ಈತ ಪ್ರಜ್ಞಾಹೀನನಾಗಿ ಬಿದ್ದಿದ್ದ. ನಂತರ ಆತನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಪಡೆದ 3 ಗಂಟೆಗಳ ನಂತರ ಆತನಿಗೆ ಪ್ರಜ್ಞೆ ಬಂದಿದೆ. ಅಂದೇ ಮನೆಗೆ ಕಳುಹಿಸಲಾಗಿದೆ. ಆದರೆ ಆತ ಅಸಹಜವಾಗಿ ವರ್ತಿಸುತ್ತಿದ್ದಾನೆ’ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.</p>.<p>‘ಸೋನೆಲಾಲ್ ಮದ್ಯ ವ್ಯಸನಿ, ಕುಡಿದ ಅಮಲಿನಲ್ಲಿಯೇ ಹೀಗೆ ಮಾಡಿರಲು ಸಾಧ್ಯ’ ಎಂದು ಗ್ರಾಮಸ್ಥರು ಹೇಳಿಕೆ ಕೊಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>