ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಕಾರ್ಜುನ್‌ ಖರ್ಗೆಗೆ ಬೆಂಗಳೂರು ಪ್ರೆಸ್‌ ಕ್ಲಬ್‌ ‘ವರ್ಷದ ವ್ಯಕ್ತಿ’

ಮುರುಗೇಶ್ ನಿರಾಣಿ, ಎಸ್.ಟಿ. ಸೋಮಶೇಖರ್‌ಗೆ ವಿಶೇಷ ಪ್ರಶಸ್ತಿ
Last Updated 20 ಡಿಸೆಂಬರ್ 2022, 16:14 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರು ಪ್ರೆಸ್‌ ಕ್ಲಬ್‌ನ 2022ನೇ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಮತ್ತು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರಿಗೆ ಪ್ರೆಸ್‌ಕ್ಲಬ್‌ನ ‘ವಿಶೇಷ ಪ್ರಶಸ್ತಿ’ ನೀಡಲಾಗುತ್ತಿದೆ.

2022ನೇ ಸಾಲಿನ ‘ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ’ಗೆ ‘ಸುಧಾ’ ವಾರಪತ್ರಿಕೆಯ ಹಿರಿಯ ಉಪಸಂಪಾದಕ ರಾಘವೇಂದ್ರ ಕೆ. ತೊಗರ್ಸಿ ಸೇರಿ 33 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಎಚ್.ಎಸ್. ಬಲರಾಂ, ಅಗ್ರಹಾರ ಕೃಷ್ಣಮೂರ್ತಿ, ಗಂಗಾಧರ ಮೊದಲಿಯಾರ್, ಚೆನ್ನ ನಾಗರಾಜ್ ಎಂ., ಶ್ರೀಧರ್ ಬಿ.ಎನ್., ಗೌತಮ್ ಮಾಚಯ್ಯ ಎಂ., ರಾಜಶೇಖರ್ ಎಸ್., ಎಚ್. ಮೂರ್ತಿ, ಸಂಗಮ್ ದೇವ್ ಐ.ಎಚ್., ಮುನೀರ್ ಅಹಮದ್ ಆಜಾದ್, ಕೆ.ವಿ. ಪರಮೇಶ್, ಸಿ.ಎಸ್. ಬೋಪಯ್ಯ, ಶ್ಯಾಂ ಬೋಜಕ್, ಭಾಗ್ಯಪ್ರಕಾಶ್ ಕೆ., ಅನಿಲ್ ವಿ. ಗೆಜ್ಜೆ, ಗಾಯಿತ್ರಿ ನಿವಾಸ್, ಬಸವರಾಜು, ಹನುಮೇಶ್ ಯಾವಗಲ್, ಶಿವಣ್ಣ, ಶೋಭಾ ಎಂ.ಸಿ., ದಿವಾಕರ್ ಸಿ., ನಾಗಭೂಷಣ್ ವೈ.ಎಂ., ವಿಲಾಸ್ ನಂದೂಡಕರ್, ಇ. ನಾಗರಾಜು, ಪಿ. ರಾಜೇಂದ್ರ, ಶಿವಾನಂದ ತಗಡೂರು ಟಿ.ವಿ., ಶಿವಪ್ರಕಾಶ್ ಎಸ್., ಓಂಕಾರ ಕಾಕಡೆ, ಜಯಪ್ರಕಾಶ್ ಆರ್., ನರಸಿಂಹ ರಾವ್ ಮತ್ತು ಗಿರಿಪ್ರಕಾಶ್ ಕೆ. ಆಯ್ಕೆಯಾಗಿದ್ದಾರೆ.

ಡಿ. 31ರಂದು ಕಬ್ಬನ್‌ ಉದ್ಯಾನದಲ್ಲಿರುವ ಪ್ರೆಸ್‌ಕ್ಲಬ್‌ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT