ವಿದ್ವಾಂಸೆ ಡಾ.ಎಸ್.ಆರ್.ಲೀಲಾ, ‘ಬೌದ್ಧ ಧರ್ಮ, ಸಾಹಿತ್ಯ ಹಾಗೂ ಕಲೆ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪಾಳಿ ಸಾಹಿತ್ಯ, ಬೌದ್ಧ ಕಲೆ ಮೊದಲಾದ ವಿಷಯಗಳ ಬಗ್ಗೆ ಡಿಪ್ಲೊಮಾ ಕೋರ್ಸ್ ಆರಂಭಿಸಬೇಕು. ಗ್ರೀಕ್, ಲ್ಯಾಟಿನ್ ಭಾಷೆಗಳ ಅಧ್ಯಯನ ನಡೆಯಬೇಕು. ನಗರದಲ್ಲಿ ಅನೇಕ ಸಂಸ್ಕೃತ ಹಾಗೂ ಬೌದ್ಧ ವಿದ್ವಾಂಸರಿದ್ದು, ಅವರ ಮಾರ್ಗದರ್ಶನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.