ದೇಶದಾದ್ಯಂತ ರೈಲ್ವೆ ಇಲಾಖೆ ಆರಂಭಿಸಿದ್ದ ‘ಆಪರೇಷನ್ ಥಂಡರ್’ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದಲ್ಲೂ ಕಾರ್ಯಾಚರಣೆ ನಡೆಸಿದ ರೈಲ್ವೆ ಅಧಿಕಾರಿಗಳು,₹4.39 ಲಕ್ಷ ಮೌಲ್ಯದ ಟಿಕೆಟ್ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ರಾಮಕೃಷ್ಣ ಟೂರ್ಸ್ ಆ್ಯಂಡ್ ಟ್ರಾವೆಲ್ಸ್,ಮನು ಟೂರ್ಸ್ ಆ್ಯಂಡ್ ಟ್ರಾವೆಲ್ಸ್, ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಅಂಬಿಕಾ ಎಲೆಕ್ಟ್ರಿಕಲ್ ಆ್ಯಂಡ್ ಹಾರ್ಡ್ವೇರ್ ಶಾಪ್, ಬೆಳಗಾವಿಯ ಮೀನಾಕ್ಷಿ ಹೈವೆ ಇಂಟರ್ನೆಟ್ನ ಮಾಲೀಕರನ್ನು ಬಂಧಿಸಲಾಗಿದೆ.ಕಂಪ್ಯೂಟರ್, ಮೊಬೈಲ್, ಇ–ಟಿಕೆಟ್ಗಳು ಮತ್ತು ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಯಶವಂತಪುರ ಮತ್ತು ಹಾವೇರಿ ನಿಲ್ದಾಣಗಳಲ್ಲಿನ ಖಾಸಗಿ ಕೌಂಟರ್ನಇಬ್ಬರನ್ನು ಬಂಧಿಸಲಾಗಿದೆ.