<p><strong>ಬೆಂಗಳೂರು:</strong> ’ನಮ್ಮ ಮೆಟ್ರೊ‘ದ ಬಹುನಿರೀಕ್ಷಿತ ವಿಸ್ತರಿತ ಮಾರ್ಗವಾದ ಕೆಂಗೇರಿಯಲ್ಲಿ ಇನ್ನೊಂದು ತಿಂಗಳಲ್ಲಿ ಮೆಟ್ರೊ ರೈಲಿನ ಸದ್ದು ಕೇಳಿ ಬರಲಿದೆ. ಮೈಸೂರು ರಸ್ತೆಯಿಂದ ಕೆಂಗೇರಿಯವರೆಗೆ ಜೂನ್ ಅಂತ್ಯದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.</p>.<p>ಈ ಮಾರ್ಗದಲ್ಲಿ ಬರುವ ಮೆಟ್ರೊ ನಿಲ್ದಾಣಗಳು ಮತ್ತು ವಾಹನ ನಿಲುಗಡೆ ಸ್ಥಳಗಳನ್ನು ಗುರುವಾರ ಪರಿಶೀಲಿಸಿದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಈ ಮಾಹಿತಿ ನೀಡಿದರು.</p>.<p>’ಈ ಮಾರ್ಗ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಆರು ನಿಲ್ದಾಣಗಳ ಪೈಕಿ ಐದರಲ್ಲಿ ಶೇ 90ರಿಂದ ಶೇ 95ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಒಂದು ನಿಲ್ದಾಣದ ಕೆಲಸ ಶೇ 70-75ರಷ್ಟಾಗಿದೆ. ಎಲ್ಲ ಕಾರ್ಯ ಪೂರ್ಣಗೊಳಿಸಲು 30ರಿಂದ 45 ದಿನ ಬೇಕಾಗಬಹುದು. ಜೂನ್ 15-20ರ ವೇಳೆಗೆ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಆಹ್ವಾನ ನೀಡಲಾಗುವುದು‘ ಎಂದು ತಿಳಿಸಿದರು.</p>.<p>7.53 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟು ಆರು ನಿಲ್ದಾಣಗಳು ಹಾಗೂ ವಾಹನ ನಿಲುಗಡೆ ಸ್ಥಳಗಳು ಬರಲಿವೆ.</p>.<p class="Subhead"><strong>ಒಟ್ಟು 26 ಕಿ.ಮೀ. ಉದ್ದದ ಮಾರ್ಗ</strong></p>.<p>ಪ್ರಸ್ತುತ ನೇರಳೆ ಮಾರ್ಗವು (ಬೈಯಪ್ಪನಹಳ್ಳಿ-ಮೈಸೂರು ರಸ್ತೆ) 18.10 ಕಿ.ಮೀ. ಇದ್ದು, 17 ನಿಲ್ದಾಣಗಳು ಬರುತ್ತವೆ. ಕೆಂಗೇರಿವರೆಗೆ ವಿಸ್ತರಣೆಯಿಂದ ಮಾರ್ಗದ ಉದ್ದ ಸುಮಾರು 26 ಕಿ.ಮೀ. ಆಗುತ್ತದೆ. ಈ ಮಾರ್ಗ ಪೂರ್ಣಗೊಂಡರೆ ನಿತ್ಯ ಸುಮಾರು 75 ಸಾವಿರ ಜನ ಪ್ರಯಾಣಿಸುವ ನಿರೀಕ್ಷೆ ಇದೆ.</p>.<p>ಬೈಯಪ್ಪನಹಳ್ಳಿಯಿಂದ ಕೆಂಗೇರಿಯವರೆಗೆ ಗರಿಷ್ಠ ಪ್ರಯಾಣ ದರ ₹56 ಹಾಗೂ ಕೆಂಗೇರಿಯಿಂದ ರೇಷ್ಮೆ ಸಂಸ್ಥೆಯವರೆಗೆ ₹60 ನಿಗದಿ ಮಾಡುವ ಉದ್ದೇಶವನ್ನು ನಿಗಮ ಹೊಂದಿದೆ.</p>.<p>ಬೈಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗಿನ15.25 ಕಿ.ಮೀ. ಉದ್ದದ ವಿಸ್ತರಿತ ಮಾರ್ಗದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಹಸಿರು ಮಾರ್ಗವು (ನಾಗಸಂದ್ರ-ರೇಷ್ಮೆ ಸಂಸ್ಥೆ) 30 ಕಿ.ಮೀ. ಇದೆ.</p>.<p class="Subhead"><strong>ಭೂಮಿಗೆ ಬೇಡಿಕೆ:</strong>ಕೆಂಗೇರಿವರೆಗೆ ಮೆಟ್ರೊ ವಿಸ್ತರಣೆಯಿಂದ ಆ ಮಾರ್ಗದುದ್ದಕ್ಕೂ ಬರುವ ಪ್ರದೇಶಗಳಲ್ಲಿರುವ ಭೂಮಿಗೆ ಬೇಡಿಕೆ ಬರಲಿದೆ. ಅಲ್ಲದೆ, ಈಗಾಗಲೇ ತಲೆಯೆತ್ತಿರುವ ವಸತಿ ಸಮುಚ್ಛಯಗಳು ಮತ್ತು ವಾಣಿಜ್ಯ ಸಮುಚ್ಛಯಗಳಿಗೂ ಬೇಡಿಕೆ ಬರಲಿದೆ.</p>.<p class="Subhead"><strong>ಪದೇ ಪದೇ ಗಡುವು ಪರಿಷ್ಕರಣೆ</strong></p>.<p>’2021ರ ಜನವರಿಗೇ ಕೆಂಗೇರಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ನಿಗಮ ಹೇಳಿತ್ತು. ಆದರೆ, ಹಲವು ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ಕಳೆದ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಸೇವೆಗೆ ಸಿದ್ಧವಾಗಲಿದೆ ಎಂದೂ ಹೇಳಲಾಗಿತ್ತು.</p>.<p>ಈ ರೀತಿ ಹಲವು ಗಡುವುಗಳನ್ನು ಮೈಸೂರು ರಸ್ತೆ-ಕೆಂಗೇರಿ ಮಾರ್ಗ ಮೀರಿದೆ. ಮೂಲ ಗಡುವು 2017 ಆಗಿತ್ತು.</p>.<p><strong>ಈ ಮಾರ್ಗದಲ್ಲಿನ ನಿಲ್ದಾಣಗಳು</strong></p>.<p>* ನಾಯಂಡಹಳ್ಳಿ</p>.<p>*ರಾಜರಾಜೇಶ್ವರಿ ನಗರ</p>.<p>* ಜ್ಞಾನಭಾರತಿ</p>.<p>* ಪಟ್ಟಣಗೆರೆ</p>.<p>* ಕೆಂಗೇರಿ ಬಸ್ ನಿಲ್ದಾಣ</p>.<p>*ಕೆಂಗೇರಿ ಮೆಟ್ರೊ ನಿಲ್ದಾಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ’ನಮ್ಮ ಮೆಟ್ರೊ‘ದ ಬಹುನಿರೀಕ್ಷಿತ ವಿಸ್ತರಿತ ಮಾರ್ಗವಾದ ಕೆಂಗೇರಿಯಲ್ಲಿ ಇನ್ನೊಂದು ತಿಂಗಳಲ್ಲಿ ಮೆಟ್ರೊ ರೈಲಿನ ಸದ್ದು ಕೇಳಿ ಬರಲಿದೆ. ಮೈಸೂರು ರಸ್ತೆಯಿಂದ ಕೆಂಗೇರಿಯವರೆಗೆ ಜೂನ್ ಅಂತ್ಯದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.</p>.<p>ಈ ಮಾರ್ಗದಲ್ಲಿ ಬರುವ ಮೆಟ್ರೊ ನಿಲ್ದಾಣಗಳು ಮತ್ತು ವಾಹನ ನಿಲುಗಡೆ ಸ್ಥಳಗಳನ್ನು ಗುರುವಾರ ಪರಿಶೀಲಿಸಿದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಈ ಮಾಹಿತಿ ನೀಡಿದರು.</p>.<p>’ಈ ಮಾರ್ಗ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಆರು ನಿಲ್ದಾಣಗಳ ಪೈಕಿ ಐದರಲ್ಲಿ ಶೇ 90ರಿಂದ ಶೇ 95ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಒಂದು ನಿಲ್ದಾಣದ ಕೆಲಸ ಶೇ 70-75ರಷ್ಟಾಗಿದೆ. ಎಲ್ಲ ಕಾರ್ಯ ಪೂರ್ಣಗೊಳಿಸಲು 30ರಿಂದ 45 ದಿನ ಬೇಕಾಗಬಹುದು. ಜೂನ್ 15-20ರ ವೇಳೆಗೆ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಆಹ್ವಾನ ನೀಡಲಾಗುವುದು‘ ಎಂದು ತಿಳಿಸಿದರು.</p>.<p>7.53 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟು ಆರು ನಿಲ್ದಾಣಗಳು ಹಾಗೂ ವಾಹನ ನಿಲುಗಡೆ ಸ್ಥಳಗಳು ಬರಲಿವೆ.</p>.<p class="Subhead"><strong>ಒಟ್ಟು 26 ಕಿ.ಮೀ. ಉದ್ದದ ಮಾರ್ಗ</strong></p>.<p>ಪ್ರಸ್ತುತ ನೇರಳೆ ಮಾರ್ಗವು (ಬೈಯಪ್ಪನಹಳ್ಳಿ-ಮೈಸೂರು ರಸ್ತೆ) 18.10 ಕಿ.ಮೀ. ಇದ್ದು, 17 ನಿಲ್ದಾಣಗಳು ಬರುತ್ತವೆ. ಕೆಂಗೇರಿವರೆಗೆ ವಿಸ್ತರಣೆಯಿಂದ ಮಾರ್ಗದ ಉದ್ದ ಸುಮಾರು 26 ಕಿ.ಮೀ. ಆಗುತ್ತದೆ. ಈ ಮಾರ್ಗ ಪೂರ್ಣಗೊಂಡರೆ ನಿತ್ಯ ಸುಮಾರು 75 ಸಾವಿರ ಜನ ಪ್ರಯಾಣಿಸುವ ನಿರೀಕ್ಷೆ ಇದೆ.</p>.<p>ಬೈಯಪ್ಪನಹಳ್ಳಿಯಿಂದ ಕೆಂಗೇರಿಯವರೆಗೆ ಗರಿಷ್ಠ ಪ್ರಯಾಣ ದರ ₹56 ಹಾಗೂ ಕೆಂಗೇರಿಯಿಂದ ರೇಷ್ಮೆ ಸಂಸ್ಥೆಯವರೆಗೆ ₹60 ನಿಗದಿ ಮಾಡುವ ಉದ್ದೇಶವನ್ನು ನಿಗಮ ಹೊಂದಿದೆ.</p>.<p>ಬೈಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗಿನ15.25 ಕಿ.ಮೀ. ಉದ್ದದ ವಿಸ್ತರಿತ ಮಾರ್ಗದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಹಸಿರು ಮಾರ್ಗವು (ನಾಗಸಂದ್ರ-ರೇಷ್ಮೆ ಸಂಸ್ಥೆ) 30 ಕಿ.ಮೀ. ಇದೆ.</p>.<p class="Subhead"><strong>ಭೂಮಿಗೆ ಬೇಡಿಕೆ:</strong>ಕೆಂಗೇರಿವರೆಗೆ ಮೆಟ್ರೊ ವಿಸ್ತರಣೆಯಿಂದ ಆ ಮಾರ್ಗದುದ್ದಕ್ಕೂ ಬರುವ ಪ್ರದೇಶಗಳಲ್ಲಿರುವ ಭೂಮಿಗೆ ಬೇಡಿಕೆ ಬರಲಿದೆ. ಅಲ್ಲದೆ, ಈಗಾಗಲೇ ತಲೆಯೆತ್ತಿರುವ ವಸತಿ ಸಮುಚ್ಛಯಗಳು ಮತ್ತು ವಾಣಿಜ್ಯ ಸಮುಚ್ಛಯಗಳಿಗೂ ಬೇಡಿಕೆ ಬರಲಿದೆ.</p>.<p class="Subhead"><strong>ಪದೇ ಪದೇ ಗಡುವು ಪರಿಷ್ಕರಣೆ</strong></p>.<p>’2021ರ ಜನವರಿಗೇ ಕೆಂಗೇರಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ನಿಗಮ ಹೇಳಿತ್ತು. ಆದರೆ, ಹಲವು ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ಕಳೆದ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಸೇವೆಗೆ ಸಿದ್ಧವಾಗಲಿದೆ ಎಂದೂ ಹೇಳಲಾಗಿತ್ತು.</p>.<p>ಈ ರೀತಿ ಹಲವು ಗಡುವುಗಳನ್ನು ಮೈಸೂರು ರಸ್ತೆ-ಕೆಂಗೇರಿ ಮಾರ್ಗ ಮೀರಿದೆ. ಮೂಲ ಗಡುವು 2017 ಆಗಿತ್ತು.</p>.<p><strong>ಈ ಮಾರ್ಗದಲ್ಲಿನ ನಿಲ್ದಾಣಗಳು</strong></p>.<p>* ನಾಯಂಡಹಳ್ಳಿ</p>.<p>*ರಾಜರಾಜೇಶ್ವರಿ ನಗರ</p>.<p>* ಜ್ಞಾನಭಾರತಿ</p>.<p>* ಪಟ್ಟಣಗೆರೆ</p>.<p>* ಕೆಂಗೇರಿ ಬಸ್ ನಿಲ್ದಾಣ</p>.<p>*ಕೆಂಗೇರಿ ಮೆಟ್ರೊ ನಿಲ್ದಾಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>