‘ಬೆಂಗಳೂರಿನಲ್ಲಿ ವಲಸಿಗರು ಸಂಚಾರಕ್ಕಾಗಿ ಬಿಎಂಟಿಸಿ ಬಸ್ಗಳನ್ನೇ ಅವಲಂಬಿಸುತ್ತಾರೆ. ಅನ್ಯಭಾಷಿಕರಿಗೆ ಕನ್ನಡಿಗರೇ ಅವರ ಭಾಷೆಯಲ್ಲಿ ಸೇವೆ ಒದಗಿಸಿದರೆ ಕನ್ನಡ ಕಲಿಯುವ ಪ್ರಕ್ರಿಯೆಯಿಂದ ದೂರಮಾಡಿದಂತೆ ಆಗುತ್ತದೆ. ಕನ್ನಡವನ್ನು ಕಲಿಯದೆಯೂ ಜೀವನ ನಡೆಸಬಹುದು ಎಂಬ ಸನ್ನಿವೇಶವನ್ನು ನಾವೇ ಸೃಷ್ಟಿಸುತ್ತಿರುವುದು ನೋವಿನ ಸಂಗತಿ. ಆದ್ದರಿಂದ ಅನ್ಯ ಭಾಷಿಕರೊಂದಿಗೆ ಕನ್ನಡದಲ್ಲಿಯೇ ನಿರ್ವಾಹಕರು ವ್ಯವಹರಿಸುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.