‘ಆರೋಪಿ ಪದವೀಧರನಾಗಿದ್ದ. ಎಲ್ಲಿಯೂ ಕೆಲಸ ಮಾಡುತ್ತಿರಲಿಲ್ಲ. ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಅಲ್ಲಿನ ಮಸೀದಿಗಳಲ್ಲಿ ಚಂದಾ ವಸೂಲಿ ಮಾಡುತ್ತಿದ್ದ. ಜುಲೈ 4ರಂದು ಬೆಂಗಳೂರಿಗೂ ಆರೋಪಿ ಬಂದಿದ್ದ. ಶಿವಾಜಿನಗರದ ರಸೆಲ್ ಮಾರುಕಟ್ಟೆ ಹಿಂಭಾಗದ ಆಜಾಂ ಮಸೀದಿಗೂ ಬಂದಿದ್ದ. ಅಲ್ಲಿ ಚಂದಾ ಪಡೆದುಕೊಂಡಿದ್ದ. ರಾತ್ರಿಯಾಗಿದ್ದರಿಂದ ಮಸೀದಿಯಲ್ಲೇ ವಾಸ್ತವ್ಯಕ್ಕೆ ಅವಕಾಶ ನೀಡುವಂತೆ ಸಿಬ್ಬಂದಿಯನ್ನು ಕೋರಿಕೊಂಡಿದ್ದ. ಮಸೀದಿ ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದು, ಮಸೀದಿಗೆ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದ’ ಎಂದು ಮೂಲಗಳು ತಿಳಿಸಿವೆ.