‘ಕಣ್ಣು, ಕಿವಿ ಸರಿಯಾಗಿದ್ದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಕೂಡ ಹೆಚ್ಚು ಗಟ್ಟಿಯಾಗಿ, ವಿಸ್ತರಿಸುತ್ತಾ ಹೋಗುತ್ತವೆ. ಆಗ ಆತ್ಮನಿರೀಕ್ಷೆ ಕೂಡ ಬರುತ್ತದೆ. ಒಂದು ವೇಳೆ ಆತ್ಮನಿರೀಕ್ಷೆಯ ಅಭಾವ ಉಂಟಾದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗಲಿದೆ. ಗಾಂಧಿ ಮತ್ತು ಕಸ್ತೂರಬಾ ಅವರು ಆತ್ಮನಿರೀಕ್ಷೆ ಹೊಂದಿದ್ದರು. ಆದರೆ, ಆದು ಕೇವಲ ಇಬ್ಬರ ಆತ್ಮನಿರೀಕ್ಷೆ ಆಗಿರಲಿಲ್ಲ. ಬದಲಾಗಿ ಒಟ್ಟು ಪ್ರಜಾಪ್ರಭುತ್ವದ ಆತ್ಮನಿರೀಕ್ಷೆಯಾಗಿತ್ತು’ ಎಂದು ತಿಳಿಸಿದರು.