ಎಂ.ಎಸ್. ನರಸಿಂಹಮೂರ್ತಿ ಅವರ ‘ಬೆಗ್ ಬಾರೋ ಅಳಿಯ’ ಹಾಗೂ ಸಂತೆಕಸಲಗೆರೆ ಪ್ರಕಾಶ್ ಅವರ ‘ಪ್ರತಿಮೆ ಇಲ್ಲದ ಊರು’ ಕೃತಿಯ ಬಗ್ಗೆ ಮಾತನಾಡಿದ ಕವಿ ಎಚ್. ಡುಂಡಿರಾಜ್, ‘ಹಾಸ್ಯದ ಮೂಲಕ ಗಂಭೀರವಾದ ಸಮಸ್ಯೆಗಳಿಗೆ ಹೇಗೆ ಪರಿಹಾರವನ್ನು ಕೊಡಬಹುದು ಎಂಬುವುದನ್ನು ‘ಬೆಗ್ ಬಾರೋ ಅಳಿಯ’ ಕೃತಿ ತಿಳಿಸಲಿದೆ. ಇದರಲ್ಲಿನ ಮೂರು ನಾಟಕಗಳು ವಿಭಿನ್ನ ಶೈಲಿಯಲ್ಲಿ ರೂಪುಗೊಂಡಿವೆ. ‘ಪ್ರತಿಮೆ ಇಲ್ಲದ ಊರು’ ಕೃತಿಯು ಗಾಂಧಿಯನ್ನು ಕಥಾವಸ್ತುವಾಗಿ ಹಿಡಿದಿಟ್ಟುಕೊಂಡಿದೆ. ಒಂದೇ ವಸ್ತುವಿನ ಬಗ್ಗೆ 12 ಕಥೆಗಳನ್ನು ಬರೆಯುವುದು ಸವಾಲಿನ ಕೆಲಸ. ಆದರೆ ಈ ಕೃತಿಯು ಅಂತಹ ಸವಾಲಿನ ಕೆಲಸವನ್ನು ನಿರ್ವಹಿಸಿದೆ’ ಎಂದು ತಿಳಿಸಿದರು.