‘ತಾರಿ ದಂಡೆ’ ಕೃತಿ ಬಗ್ಗೆ ಮಾತನಾಡಿದ ವಿಮರ್ಶಕಿ ವನಮಾಲಾ ವಿಶ್ವನಾಥ್, ‘ಕೃತಿಯು ಮೂರು ಭಾಗಗಳನ್ನು ಹೊಂದಿದೆ. ಮೊದಲ ಭಾಗವು ಬಾಲ್ಯದ ನೆನಪುಗಳನ್ನು ಕಟ್ಟಿಕೊಟ್ಟರೆ, ಎರಡನೇ ಭಾಗವು ವ್ಯಕ್ತಿ ಪರಿಚಯದ ಚಿತ್ರಣಗಳನ್ನು ನೀಡುತ್ತದೆ. ಹಾಗೆಯೇ, ಮೂರನೇ ಭಾಗದಲ್ಲಿ ಕಾಯ್ಕಿಣಿ ಅವರು ತಾವು ಓದಿದ ಪುಸ್ತಕಗಳ ಕುರಿತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕವಿ ಹೃದಯವನ್ನೇ ಹೆಚ್ಚಾಗಿ ಕಾಣಿಸುವ ಕಾಯ್ಕಿಣಿಯವರು, ಈ ಕೃತಿಯಲ್ಲಿ ರೂಪಕಗಳ ಮೂಲಕವೂ ಅಲ್ಲಲ್ಲಿ ಕಾಣಸಿಕ್ಕಿದ್ದಾರೆ’ ಎಂದು ಹೇಳಿದರು.