ಜ್ವರದಿಂದ ಬಳಲುತ್ತಿದ್ದ ಅಮರ್ ಶೆಟ್ಟಿ ಅವರು, ಆಗಸ್ಟ್ 13ರಂದು ಕೆ.ಪಿ.ಅಗ್ರಹಾರದ 4ನೇ ಕ್ರಾಸ್ನಲ್ಲಿರುವ ಭಾಗ್ಯ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲಿನ ವೈದ್ಯರು, ಚುಚ್ಚುಮದ್ದು ನೀಡಿದ್ದರು. ನಂತರ, ಮಾತ್ರೆಗಳನ್ನು ಬರೆದುಕೊಟ್ಟಿದ್ದರು. ಮನೆಗೆ ತೆರಳಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ ವೇಳೆ ಅವರಿಗೆ ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ಊತ ಕಾಣಿಸಿಕೊಂಡು ನೋವಿನಿಂದ ನರಳಲು ಆರಂಭಿಸಿದ್ದರು. ಅದಾದ ಮೇಲೆ ರಾಜಾಜಿನಗರದ ಮತ್ತೊಂದು ಕ್ಲಿನಿಕ್ಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು. ನೋವು ಕಡಿಮೆ ಆಗಿರಲಿಲ್ಲ. ಅಲ್ಲಿಂದ ಕಿಮ್ಸ್ಗೆ ದಾಖಲಾಗಿದ್ದರು. ಆಗಸ್ಟ್ 18ರಂದು ಅವರು ಮೃತಪಟ್ಟಿದ್ದರು.