ಈ ಪ್ರಕರಣದಲ್ಲಿ ಪುಟ್ಟರಾಜು ಅವರಿಗೆ ಜಾಮೀನು ಮಂಜೂರು ಮಾಡಿದ್ದ ಸಿಬಿಐ ವಿಶೇಷ ನ್ಯಾಯಾಲಯ, ದೇಶ ತೊರೆಯಬಾರದು ಎಂಬ ಷರತ್ತು ವಿಧಿಸಿತ್ತು. ಲಂಡನ್ನ ಕೆಂಟ್ನಲ್ಲಿರುವ ಹ್ಯಾಮ್ಸ್ಟ್ರೀಟ್ ಡೆಂಟಲ್ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆಯಲು ಡಿಸೆಂಬರ್ 10ರಿಂದ 30ರವರೆಗೆ ಲಂಡನ್ಗೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಶಾಸಕರು, ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿದ್ದರು.