ಕೋರಮಂಗಲ ಮತ್ತು ಶಿಡ್ಲಘಟ್ಟ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿ ಸತೀಶ್ ಹೆಸರಿದೆ. ಶಿಡ್ಲಘಟ್ಟ ಠಾಣೆಯ ಪಟ್ಟಿಯಲ್ಲಿ ಮಹೇಶ್ ಹೆಸರಿದೆ. ಇಬ್ಬರೂ 2016ರಲ್ಲಿ ಶಿಡ್ಲಘಟ್ಟ ನಗರಸಭೆ ಸದಸ್ಯ ವೆಂಕಟರಮಣ ಮತ್ತು 2019ರಲ್ಲಿ ತಮಿಳುನಾಡಿನ ಬಾಗಲೂರಿನಲ್ಲಿ ತರಕಾರಿ ಮಹೇಶ ಎಂಬಾತನ ಕೊಲೆ ಪ್ರಕರಣದ ಆರೋಪಿಗಳು. ಅಲ್ಲದೆ, ಇಬ್ಬರ ಮೇಲೆಯೂ ಇನ್ನೂ ಕೆಲವು ಕೊಲೆ, ಹಲ್ಲೆ ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.