‘ಬಿಜೆಪಿ ಕಾರ್ಯಕರ್ತರಾದ ಯಾಸ್ಮೀನ್ ಮತ್ತು ಸಲೀಂ ಎಂಬುವವರು ಮತದಾರರಿಗೆ ಹಣ ಹಂಚಿ, ಅವರಿಂದ ಮತದಾರರ ಗುರುತಿನ ಚೀಟಿಯನ್ನು ಬಲವಂತವಾಗಿ ಸಂಗ್ರಹಿಸಿದ್ದಾರೆ’ ಎಂದು ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ್ ಆರ್. ಸೋಮವಾರ ದೂರು ನೀಡಿದ್ದಾರೆ. ಯಶವಂತಪುರ ಠಾಣೆಯ ಪೊಲೀಸರು ಅಸಂಜ್ಞೇಯ (ಎನ್ಸಿ) ಪ್ರಕರಣ ದಾಖಲಿಸಿಕೊಂಡಿದ್ದಾರೆ.