ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕಾನ್ಸ್ಟೆಬಲ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಹೂಹಾಸಿನ ಮೇಲೆ ನಡೆದುಕೊಂಡು ಬಂದ ಕಾನ್ಸ್ಟೆಬಲ್ ಅವರ ಮೇಲೆ ಕಮಿಷನರ್ ಭಾಸ್ಕರ್ ರಾವ್, ಜಂಟಿ ಕಮಿಷನರ್ (ಸಂಚಾರ) ಬಿ.ಆರ್.ರವಿಕಾಂತೇಗೌಡ, ಡಿಸಿಪಿ ನಾರಾಯಣ ಹೂ ಮಳೆಗೆರೆದರು. ಹೂಹಾರ ಹಾಕಿ, ಹೂಗುಚ್ಛ ಕೊಟ್ಟು ಅಭಿನಂದಿಸಿದರು. ಆಸ್ಪತ್ರೆ ಆವರಣದಿಂದ ರಸ್ತೆಯವರೆಗೂ ವಾದ್ಯ ಮೇಳದ ಜೊತೆಯಲ್ಲೇ ಅವರನ್ನು ಕರೆತರಲಾಯಿತು. ಸಹೋದ್ಯೋಗಿಗಳು ಶುಭ ಕೋರಿದರು.