<p><strong>ಬೆಂಗಳೂರು:</strong> ನಗರದಲ್ಲಿ ರಸ್ತೆಯ ಬದಿ ನೆಟ್ಟಿದ್ದ ನೂರಾರು ಸಸಿಗಳು ದಿನೇ ದಿನೇ ಬೆಳೆಯುತ್ತಿವೆ. ಅವುಗಳ ರಕ್ಷಣೆಗೆ ಹಾಕಿರುವ ‘ರಕ್ಷಾ ಕವಚ’ವನ್ನು (ಕಬ್ಬಿಣದ ತಂತಿಗಳ ಜಾಲರಿ) ತೆರವುಗೊಳಿಸದೇ ಇರುವುದರಿಂದ ಗಿಡಗಳ ಬೆಳವಣಿಗೆಗೆ ಕವಚವೇ ಕಂಟಕವಾಗಿ ಪರಿಣಮಿಸಿವೆ.</p>.<p>ಸಸಿ ನೆಟ್ಟ ಮೇಲೆ ಬೇರು ಗಟ್ಟಿಯಾಗಿ, ಕೊಂಬೆ ಹರಡಿ, ಹತ್ತು ಅಡಿ ಎತ್ತರಕ್ಕೆ ಬೆಳೆಯುವವರೆಗೆ ‘ಜಾಲರಿ’ ಅಗತ್ಯವಿದೆ. ಗಿಡ ಬೆಳೆದ ನಂತರ ಅದನ್ನು ತೆರವು ಮಾಡಬೇಕು. ಆದರೆ, ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಈ ಕಾರ್ಯವನ್ನು ಕೈಗೊಳ್ಳದಿರುವುದರಿಂದ ‘ಜಾಲರಿ’ ಅಳವಡಿಸಿದ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದೆ.</p>.<p>‘ಗಿಡ ಹತ್ತು ಅಡಿ ಬೆಳೆಯಲು ಕನಿಷ್ಠ 3 ವರ್ಷದಿಂದ 5 ವರ್ಷದವರೆಗೂ ಅವಧಿ ಬೇಕಾಗುತ್ತದೆ. ಕೆಲವು ಸಸಿಗಳು ವೇಗವಾಗಿ ಬೆಳೆದರೆ, ಇನ್ನೂ ಕೆಲವು ನಿಧಾನಗತಿಯಲ್ಲಿ ಬೆಳೆಯುತ್ತವೆ’ ಎಂದು ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್ ತಿಳಿಸಿದರು.</p>.<p>‘ಕಾಂಡ ದಪ್ಪವಾಗುವಾಗ ಸಸಿಗೆ ಯಾವುದೇ ಅಡ್ಡಿ ಇರಬಾರದು. ಆದರೆ, ಜಾಲರಿ ಅಳವಡಿಸಿದ ಕಡೆಗಳಲ್ಲಿ ಕಬ್ಬಿಣದ ತಂತಿಗಳ ಮಧ್ಯೆ ಗಿಡಗಳು ಸಿಲುಕಿಕೊಂಡಿವೆ. ತಂತಿ ತಾಗಿದ ಭಾಗಗಳಲ್ಲಿ ಗಿಡಗಳು ಕೊಳೆಯುತ್ತವೆ. ಹೀಗೆ ‘ಜಾಲರಿ’ ತಂದಿಡುವ ಅವಾಂತ ರಗಳಿಂದ ಗಿಡಗಳು ಸರಾಗವಾಗಿ ಬೆಳೆಯಲಾರವು’ ಎಂದು ಹೇಳಿದರು.</p>.<p>‘ಸಸಿಗೆ ನೀರು, ಗೊಬ್ಬರ ಹಾಕುವುದಷ್ಟೇ ಅಲ್ಲ. ಅವುಗಳ ಬೆಳವಣಿಗೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜಾಲರಿ ಅಳವ ಡಿಸಿದ ಕಡೆಗಳನ್ನು ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಈಗಾ ಗಲೇ ಮನವಿ ಸಲ್ಲಿಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯದ<br />ನಂತರ ತೆರವುಗೊಳಿಸುವುದಕ್ಕಾಗಿ ಟೆಂಡರ್ ಕರೆಯುವುದಾಗಿ ಅಧಿಕಾರಿಗಳು ತಿಳಿಸಿ ದ್ದಾರೆ’ ಎಂದೂ ಅವರು ಹೇಳಿದರು.</p>.<p>ಗಿಡಗಳಿಗೆ ಅಳವಡಿಸಿರುವ ಜಾಲರಿ ಯನ್ನು ಕೆಲವೆಡೆ ಸಾರ್ವಜನಿಕರು ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿದ್ದಾರೆ. ಜಾಲರಿಯೊಳಗೆ ಬರೀ ಪ್ಲಾಸ್ಟಿಕ್ ತುಂಬಿದ್ದಾರೆ. ಗುಟ್ಕಾ, ಪಾನ್, ತಂಬಾಕು ಪಾಕೀಟ್ಗಳನ್ನು ಪಾದಚಾರಿಗಳು ಮರದ ಬುಡಕ್ಕೆ ಎಸೆಯುತ್ತಾರೆ. ಇದೂ ಕೂಡ ಗಿಡ ಬೆಳೆವಣಿಗೆಗೆ<br />ಸಮಸ್ಯೆಯಾಗುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ರಸ್ತೆಯ ಬದಿ ನೆಟ್ಟಿದ್ದ ನೂರಾರು ಸಸಿಗಳು ದಿನೇ ದಿನೇ ಬೆಳೆಯುತ್ತಿವೆ. ಅವುಗಳ ರಕ್ಷಣೆಗೆ ಹಾಕಿರುವ ‘ರಕ್ಷಾ ಕವಚ’ವನ್ನು (ಕಬ್ಬಿಣದ ತಂತಿಗಳ ಜಾಲರಿ) ತೆರವುಗೊಳಿಸದೇ ಇರುವುದರಿಂದ ಗಿಡಗಳ ಬೆಳವಣಿಗೆಗೆ ಕವಚವೇ ಕಂಟಕವಾಗಿ ಪರಿಣಮಿಸಿವೆ.</p>.<p>ಸಸಿ ನೆಟ್ಟ ಮೇಲೆ ಬೇರು ಗಟ್ಟಿಯಾಗಿ, ಕೊಂಬೆ ಹರಡಿ, ಹತ್ತು ಅಡಿ ಎತ್ತರಕ್ಕೆ ಬೆಳೆಯುವವರೆಗೆ ‘ಜಾಲರಿ’ ಅಗತ್ಯವಿದೆ. ಗಿಡ ಬೆಳೆದ ನಂತರ ಅದನ್ನು ತೆರವು ಮಾಡಬೇಕು. ಆದರೆ, ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಈ ಕಾರ್ಯವನ್ನು ಕೈಗೊಳ್ಳದಿರುವುದರಿಂದ ‘ಜಾಲರಿ’ ಅಳವಡಿಸಿದ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದೆ.</p>.<p>‘ಗಿಡ ಹತ್ತು ಅಡಿ ಬೆಳೆಯಲು ಕನಿಷ್ಠ 3 ವರ್ಷದಿಂದ 5 ವರ್ಷದವರೆಗೂ ಅವಧಿ ಬೇಕಾಗುತ್ತದೆ. ಕೆಲವು ಸಸಿಗಳು ವೇಗವಾಗಿ ಬೆಳೆದರೆ, ಇನ್ನೂ ಕೆಲವು ನಿಧಾನಗತಿಯಲ್ಲಿ ಬೆಳೆಯುತ್ತವೆ’ ಎಂದು ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್ ತಿಳಿಸಿದರು.</p>.<p>‘ಕಾಂಡ ದಪ್ಪವಾಗುವಾಗ ಸಸಿಗೆ ಯಾವುದೇ ಅಡ್ಡಿ ಇರಬಾರದು. ಆದರೆ, ಜಾಲರಿ ಅಳವಡಿಸಿದ ಕಡೆಗಳಲ್ಲಿ ಕಬ್ಬಿಣದ ತಂತಿಗಳ ಮಧ್ಯೆ ಗಿಡಗಳು ಸಿಲುಕಿಕೊಂಡಿವೆ. ತಂತಿ ತಾಗಿದ ಭಾಗಗಳಲ್ಲಿ ಗಿಡಗಳು ಕೊಳೆಯುತ್ತವೆ. ಹೀಗೆ ‘ಜಾಲರಿ’ ತಂದಿಡುವ ಅವಾಂತ ರಗಳಿಂದ ಗಿಡಗಳು ಸರಾಗವಾಗಿ ಬೆಳೆಯಲಾರವು’ ಎಂದು ಹೇಳಿದರು.</p>.<p>‘ಸಸಿಗೆ ನೀರು, ಗೊಬ್ಬರ ಹಾಕುವುದಷ್ಟೇ ಅಲ್ಲ. ಅವುಗಳ ಬೆಳವಣಿಗೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜಾಲರಿ ಅಳವ ಡಿಸಿದ ಕಡೆಗಳನ್ನು ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಈಗಾ ಗಲೇ ಮನವಿ ಸಲ್ಲಿಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯದ<br />ನಂತರ ತೆರವುಗೊಳಿಸುವುದಕ್ಕಾಗಿ ಟೆಂಡರ್ ಕರೆಯುವುದಾಗಿ ಅಧಿಕಾರಿಗಳು ತಿಳಿಸಿ ದ್ದಾರೆ’ ಎಂದೂ ಅವರು ಹೇಳಿದರು.</p>.<p>ಗಿಡಗಳಿಗೆ ಅಳವಡಿಸಿರುವ ಜಾಲರಿ ಯನ್ನು ಕೆಲವೆಡೆ ಸಾರ್ವಜನಿಕರು ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿದ್ದಾರೆ. ಜಾಲರಿಯೊಳಗೆ ಬರೀ ಪ್ಲಾಸ್ಟಿಕ್ ತುಂಬಿದ್ದಾರೆ. ಗುಟ್ಕಾ, ಪಾನ್, ತಂಬಾಕು ಪಾಕೀಟ್ಗಳನ್ನು ಪಾದಚಾರಿಗಳು ಮರದ ಬುಡಕ್ಕೆ ಎಸೆಯುತ್ತಾರೆ. ಇದೂ ಕೂಡ ಗಿಡ ಬೆಳೆವಣಿಗೆಗೆ<br />ಸಮಸ್ಯೆಯಾಗುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>