‘ಕೋವಿಡ್ನಿಂದ ಮನೆಯಿಂದಲೇ ಕೆಲಸದ ಪರಿಕಲ್ಪನೆ ಬಹುತೇಕ ಕಂಪನಿಗಳಲ್ಲಿ ಸಾಮಾನ್ಯವಾಗಿದೆ. ಇಂತಹ ಕೆಲಸ ಬಾಗಲಕೋಟೆಯಿಂದಲೂ ಮಾಡಬಹುದು, ಮಂಡ್ಯದಿಂದಲೂ ಮಾಡಬಹುದು. ಬೆಂಗಳೂರಿನ ದಟ್ಟಣೆ ಕಡಿಮೆಯಾಗುತ್ತದೆ. ಬೆಂಗಳೂರಿಗೆ ಹಾಕುವ ಬಂಡವಾಳ ಜಿಲ್ಲೆಗಳಿಗೆ ಹರಿಯುತ್ತದೆ. ಈ ಅವಕಾಶವನ್ನು ಜಾಣ್ಮೆಯಿಂದ ಬಳಸಿಕೊಂಡರೆ ನಾಡಿನ ಸರ್ವಾಂಗೀಣ ಅಭಿವೃದ್ಧಿ ನಿಶ್ಚಿತ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.