‘ದೂರುದಾರ ಬಳಿಯ ₹ 26 ಸಾವಿರ ನಗದು ಹಾಗೂ ಮೊಬೈಲ್ನ್ನು ಆರೋಪಿಗಳು ಕಿತ್ತುಕೊಂಡಿದ್ದರು. ದೂರುದಾರರ ಸಹೋದರಿಂದ ₹ 25 ಸಾವಿರ ಯುಪಿಐ ಮೂಲಕ ಹಾಕಿಸಿಕೊಂಡು, ಅದನ್ನೂ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ನಂತರ, ದೂರುದಾರರ ಕಾರು ಸಮೇತ ಆರೋಪಿಗಳು ಪರಾರಿಯಾಗಿದ್ದರು. ಕೆಲ ಹೊತ್ತಿನ ನಂತರ ಕರೆ ಮಾಡಿದ್ದ ಆರೋಪಿಗಳು, ಕಾರು ವಾಪಸು ನೀಡಲು ₹ 60 ಸಾವಿರ ನೀಡುವಂತೆ ಒತ್ತಾಯಿಸಿದ್ದರು. ಬೇಸತ್ತ ದೂರುದಾರ, ಠಾಣೆಗೆ ಬಂದು ವಿಷಯ ತಿಳಿಸಿದ್ದರು’ ಎಂದು ಪೊಲೀಸರು ತಿಳಿಸಿದರು.