ಕೆಂಗೇರಿ: ‘ದೇಶದಲ್ಲಿ ಪ್ರತಿದಿನ ಹತ್ತಾರು ಸೈಬರ್ ಅಪರಾಧಗಳು ದಾಖಲಾಗುತ್ತಿದೆ. ಕೋಟ್ಯಂತರ ರೂಪಾಯಿ ಹಣ ಕಣ್ಣಿಗೆ ಕಾಣದ ಪಾತಕಿಗಳ ಖಾತೆ ಸೇರುತ್ತಿದೆ. ದುರದೃಷ್ಟವಶಾತ್ ಇಂತಹ ಘೋರ ಅಪರಾಧವನ್ನು ತಡೆಯಲು ಬೇಕಾದ ನುರಿತ ಮಾನವ ಸಂಪನ್ಮೂಲವನ್ನು ದೇಶ ಹೊಂದಿಲ್ಲ’ ಎಂದು ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ಬನ್ನೂರ್ ಮಠ್ ಆತಂಕ ವ್ಯಕ್ತ ಪಡಿಸಿದರು.