ಭಕ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು. ರಥ ಎಳೆಯುತ್ತಿದ್ದಂತೆ ಸೂರು ಬಾಳೆಹಣ್ಣನ್ನು ಎಸೆದು ಸಂಭ್ರಮ ಪಟ್ಟರು. ನಂದಿಧ್ವಜ, ವೀರಗಾಸೆ, ತಮಟೆ ಕಲಾವಿದರು ಮಂಗಳವಾಧ್ಯಗಳೊಂದಿಗೆ ಪ್ರಾಕಾರೋತ್ಸವ ನಡೆಸಿದರು. ಹತ್ತಕ್ಕೂ ಹೆಚ್ಚು ಜೊತೆ ಎತ್ತುಗಳನ್ನು ಮೆರವಣಿಗೆ ಮಾಡಲಾಯಿತು. ಸಂಜೆ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು.