‘ರಾಗಿ, ಭತ್ತ, ತೊಗರಿ, ಹುರುಳಿ, ಇನ್ನಿತರ ಬೆಳೆಗಳನ್ನು ಕೊಯ್ಲು ಮಾಡುವಾಗ, ಕೂಡಿಡುವಾಗ ಮತ್ತು ಒಕ್ಕಣಿ ಮಾಡುವಾಗ ಅಕಾಲಿಕ ಮಳೆ ಬಂದು ಫಸಲು ಹಾಳಾಗಿತ್ತು. ಹುಲ್ಲು, ರಾಗಿ ಕಪ್ಪಾದವು. ಇದೀಗ ಮತ್ತೆ ಮಳೆ ಬಂದು, ಆದಾಯದ ಮೂಲಗಳಾದ ಹುಣಸೆ, ಮಾವು ಶೀಗೆಕಾಯಿ ಬೆಳೆಗಳು ಹಾಳಾಗಿವೆ’ ಎಂದು ರೈತ ತಿಮ್ಮಣ್ಣ ಅಳಲು ತೋಡಿಕೊಂಡರು.