‘ತೋಟಗಳಲ್ಲಿ ಹೂವು ಬಿಟ್ಟಾಗಲೇ ವ್ಯಾಪಾರಿಗಳಿಂದ ಮುಂಗಡವಾಗಿ ಒಂದಷ್ಟು ಹಣ ತೆಗೆದುಕೊಂಡಿದ್ದೇವೆ. ಈಗ ಕಾಯಿ ಉದುರುತ್ತಿರುವುದರಿಂದ ವ್ಯಾಪಾರಸ್ಥರು, ‘ನಮಗೆ ನಷ್ಟವಾಗುತ್ತದೆ‘ ಎಂದು ಇರುವ ಫಸಲನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದರೆ, ಗುತ್ತಿಗೆಯೇ ಬೇಡ ಎನ್ನುತ್ತಿದ್ದಾರೆ. ನಮಗೆ ದಿಕ್ಕೇ ತೋಚದಂತಾಗಿದೆ‘ ಎಂದರು ರೈತ ಮಂಜುನಾಥ್.