‘ಸರ್ಕಾರ ಹತ್ತು ವರ್ಷಗಳ ಹಿಂದೆ ₹300 ಕೋಟಿ ವೆಚ್ಚ ಮಾಡಿ ಇಲ್ಲಿ ಎ.ಪಿ.ಎಂ.ಸಿ.ಯನ್ನು ಸ್ಥಾಪಿಸಿತ್ತು. ಆದರೆ ಇನ್ನೂ ಮೂಲಸೌಕರ್ಯ ಕಲ್ಪಿಸಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಾಹನಗಳು ಸಂಚರಿಸಲು ರಸ್ತೆಯನ್ನೂ ವಿಸ್ತರಿಸಿಲ್ಲ. ಶಾಸಕ ಎಸ್.ಆರ್.ವಿಶ್ವನಾಥ್, ಸಚಿವರಾದ ಬಿ.ಸಿ.ಪಾಟೀಲ, ಎಸ್.ಟಿ. ಸೋಮಶೇಖರ್ ಅವರು ಎಲ್ಲ ಸೌಲಭ್ಯವನ್ನು ಒದಗಿಸಿ ಕೊಡುತ್ತೇವೆ ಎಂದು ಹೇಳಿ ಹೋದವರು ಇಲ್ಲಿಯ ತನಕ ಒಂದು ಬೇಡಿಕೆಯನ್ನೂ ಈಡೇರಿಸಿಲ್ಲ’ ಎಂದು ಸಂಘದ ಕಾರ್ಯದರ್ಶಿ ಕೆ.ಪಿ. ಜೈಕುಮಾರ್ ಆರೋಪಿಸಿದರು.