ಸಂಘದ ಜಕ್ಕೂರು ಶಾಖೆಯ ಮುಖ್ಯಸ್ಥ ಶಿವಪ್ರೇಮಾನಂದ ಸ್ವಾಮೀಜಿ ಮಾತನಾಡಿ, ’ಕಳೆದ 14 ವರ್ಷಗಳಿಂದ ಕಾಳಿಪೂಜಾ ಸಮಾರಂಭವನ್ನು ಆಯೋಜಿಸಲಾಗುತ್ತಿದ್ದು, ಪ್ರತಿವರ್ಷ ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಲ್ಲಿ ನೆಲೆಸಿರುವ ಬೆಂಗಾಲಿ ಸಮುದಾಯದ ಸಾವಿರಾರು ಜನರು ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಸಲ ಕೋವಿಡ್-19ರ ಕಾರಣ ಕಡಿಮೆ ಜನರು ಭಾಗವಹಿಸಿದ್ದು, ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸರಳವಾಗಿ ಈ ಕಾರ್ಯಕ್ರಮ ಆಚರಿಸಲಾಗಿದೆ‘ ಎಂದು ತಿಳಿಸಿದರು.