ನೆಲಮಂಗಲ: ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದ ಭರತೇಶ್ ಸುಮುಖ ಅವರು ಕೂಲಿಪುರದಲ್ಲಿ ಜಿಂಕೆ ಯೊಂದನ್ನು ನಾಯಿಗಳ ದಾಳಿಯಿಂದ ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ನಾಯಿಗಳ ದಾಳಿಗೆ ತುತ್ತಾಗಿದ್ದ ಜಿಂಕೆಯನ್ನು ಗಮನಿಸಿದ ಭರತೇಶ್ ಅವರು ಸ್ಥಳೀಯ ಅಯ್ಯಪ್ಪ ಅವರ ಸಹಕಾರದಿಂದ ರಕ್ಷಿಸಿ ಅರಣ್ಯಾಧಿಕಾರಿ ಲಷ್ಕರ್ ನಾಯಕ್, ಉಪವಲಯ ಅರಣ್ಯಾಧಿಕಾರಿ ವಿ.ಶಿವಕುಮಾರ್, ಅರಣ್ಯ ರಕ್ಷಕ ಹರೀಶ್ ಅವರಿಗೆ ಹಸ್ತಾಂತರಿಸಿದರು.