ಬುಧವಾರ ಈ ಬಗ್ಗೆ ಮಾತನಾಡಿದ ವೇದಿಕೆ ನಿರ್ದೇಶಕ ಜಿ.ವಿ. ಮಂಜುನಾಥ್, ‘ದೈನಂದಿನ ಚಟುವಟಿಕೆಗಳಿಗಾಗಿ ಚಿಂತಾಮಣಿ, ಕೋಲಾರ, ಕೆಜಿಎಫ್, ಮುಳಬಾಗಿಲು, ಆಂಧ್ರಪ್ರದೇಶದ ಮದನಪಲ್ಲಿ, ಕಡಪಾ ಕಡೆಯಿಂದ ಪ್ರತಿನಿತ್ಯ ಸಾವಿರಾರು ಜನರು ಹಳೆ ಮದ್ರಾಸ್ ರಸ್ತೆಯ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಹೋಗುತ್ತಾರೆ. ಅಲ್ಲಿನ ಲಿಫ್ಟ್ ಸುಮಾರು ಒಂದು ತಿಂಗಳಿನಿಂದ ಕೆಟ್ಟು ನಿಂತಿದ್ದು, ಸಾವಿರಾರು ಮಂದಿ ಸಮಸ್ಯೆ ಎದುರಿಸುವಂತಾಗಿದೆ’ ಎಂದರು.