ವಿಚಾರಣೆಯಲ್ಲಿ ಎನ್ಐಎ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್, ’ಸಮಾಜದ ಕಾನೂನು ಮತ್ತು ಶಾಂತಿ ಪಾಲನೆ ಕಾಪಾಡುವ ಪೊಲೀಸರ ಮೇಲೆಯೇ ಹಲ್ಲೆ, ಪೊಲೀಸ್ ಠಾಣೆಯ ಮೇಲೆ ಪೆಟ್ರೋಲ್ ಎರಚಿ ಸುಡುವುದು ಭಯೋತ್ಪಾದನೆಯ ಕೃತ್ಯ. ಪೊಲೀಸರಿಗೇ ಹೀಗಾದರೆ ಶ್ರೀಸಾಮಾನ್ಯರ ರಕ್ಷಣೆ ಹೇಗೆ ಸಾಧ್ಯ. ಆರೋಪಿ ಎಸ್ಡಿಪಿಐ ಮುಖಂಡನಾಗಿದ್ದು ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡಿರುವ ಕಾರಣ ಜಾಮೀನು ನೀಡಬಾರದು‘ ಎಂದು ಪ್ರತಿಪಾದಿಸಿದ್ದರು.